ಧಾರವಾಡ: ಜೂಜಾಟ ಆಡಿಸುತ್ತಿದ್ದ ಇಬ್ಬರು ರೌಡಿಶೀಟರ್ಗಳನ್ನು ವಿದ್ಯಾಗಿರಿ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಽಸಿದ್ದಾರೆ. ಅಕ್ಷಯ ಹೊಳೆಪ್ಪನವರ ಹಾಗೂ ನಾಗರಾಜ ಮಾಂದೇಕರ ಬಂಽತರು.
ಇನ್ಸ್ಪೆಕ್ಟರ್ ಸಂಗಮೇಶ ದಿಡಿಗಿನಾಳ ನೇತೃತ್ವದ ತಂಡ ೨ ಕಡೆಗಳಲ್ಲಿ ದಾಳಿ ನಡೆಸಿದಾಗ ರೌಡಿಶೀಟರ್ ಪಟ್ಟಿಯಲ್ಲಿದ್ದ ಇವರಿಬ್ಬರನ್ನು ಬಂಽಸಿದೆ. ಅವರಿಂದ 40,080 ರೂ. ನಗದÄ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ, ರೌಡಿಶೀಟರ್ಗಳ ಮುಚ್ಚಳಿಕೆ ಪತ್ರವನ್ನು (ಬಾಂಡ್) ಮುಟ್ಟುಗೋಲು ಹಾಕುವಂತೆ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಆದೇಶಿಸಿದ್ದಾರೆ. ಕಾನೂನು ಬಾಹಿರ ಚಟುವಟಿಕೆ ಮತ್ತು ರೌಡಿಸಂ ಚಟುಚಟಿಕೆಗಳಿಗೆ ಅವಕಾಶವಿಲ್ಲ ಎಂಬ ಸಂದೇಶ ಸಾರಿದ್ದಾರೆ.
ರೌಡಿಶೀಟರ್ಗಳ ಅಡ್ಡೆಗಳ ಮೇಲೆ ದಾಳಿ ಮಾಡಿ ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿಯ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಶಿಸಿದ್ದಾರೆ.