ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಲಾದ ಕರ್ನಾಟಕ ರತ್ನ ಪ್ರಶಸ್ತಿಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೂಪರ್ಸ್ಟಾರ್ ರಜನಿಕಾಂತ್, ನಟ ಜೂ.ಎನ್ಟಿಆರ್ ಜತೆಯಾಗಿ ಪ್ರದಾನ ಮಾಡಿದರು. ಈ ಮೂಲಕ ರಾಜ್ ಕುಟುಂಬ ಎರಡನೇ ಸಲ ಕರ್ನಾಟಕ ರತ್ನಕ್ಕೆ ಭಾಜನವಾದಂತಾಗಿದೆ.
ಡಾ.ರಾಜಕುಮಾರ್ ಅವರಿಗೆ 1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿತ್ತು. ಅದಾಗಿ 30ನೇ ವರ್ಷದಲ್ಲಿ ಪುತ್ರ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಕೂಡ ಕರ್ನಾಟಕ ರತ್ನಕ್ಕೆ ಪಾತ್ರರಾಗಿದ್ದಾರೆ. ಹೀಗಾಗಿ ಮೂರು ದಶಕಗಳಲ್ಲಿ 2 ಕರ್ನಾಟಕ ರತ್ನಗಳಿಗೆ ಭಾಜನವಾದ ಹೆಗ್ಗಳಿಕೆ ಡಾ.ರಾಜ್ ಕುಟುಂಬದ್ದಾಗಿದೆ.
ಮೂವತ್ತು ವರ್ಷಗಳ ಅಂತರದಲ್ಲಿ ತಮ್ಮ ಕುಟುಂಬ ಎರಡು ಕರ್ನಾಟಕ ರತ್ನಕ್ಕೆ ಪಾತ್ರವಾದ ಸಂಗತಿಯನ್ನು ಶಿವರಾಜ್ಕುಮಾರ್ ಮತ್ತು ರಾಘವೇಂದ್ರ ರಾಜ್ಕುಮಾರ್ ಇಬ್ಬರೂ ಇಂದು ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸಿದರು.
ಅಪ್ಪು ಪರವಾಗಿ ಕರ್ನಾಟಕ ರತ್ನ ಸ್ವೀಕರಿಸಿದ ಅಶ್ವಿನಿ: ವರುಣ ಸಿಂಚನದ ನಡುವೆ ಪ್ರಶಸ್ತಿ ಪ್ರದಾನ
ಅಪ್ಪು ಬಗ್ಗೆ ಜಾಸ್ತಿ ಮಾತನಾಡುವುದಿದೆ ಎಂದು ರಜನಿಕಾಂತ್ ಹೇಳಿದ್ದಿಷ್ಟು..