More

    ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳಿ, ಜೈಲು ಸೇರಿದರು… ಹೊಸ ನಿಯಮದನ್ವಯ ರಾಜಸ್ಥಾನದಲ್ಲಿ ಕಾರ್ಯಾಚರಣೆ

    ಭರತ್​ಪುರ (ರಾಜಸ್ಥಾನ): ಗುಟ್ಕಾ ತಿಂದು ರಸ್ತೆಯಲ್ಲಿ ಉಗುಳಿದ ಆರೋಪದ ಮೇರೆಗೆ ರಾಜಸ್ಥಾನ ಪೊಲೀಸರು ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

    ರಾಜಸ್ಥಾನದ ಉಚ್ಚೈನ್​ ನಿವಾಸಿಗಳಾದ ಗುಣೇಶ್​ ಮತ್ತು ರಾಜು ಬಂಧಿತರು. ರಾಜಸ್ಥಾನ ಸಾಂಕ್ರಾಮಿಕ ರೋಗ ತಡೆ ಕಾಯ್ದೆ, 1957ರ ಪ್ರಕಾರ ಇವರನ್ನು ಬಂಧಿಸಲಾಗಿದೆ.

    ಕೋವಿಡ್​ 19 ಹರಡುವಿಕೆ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಉಗಿಯುವುದನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶ ಜಾರಿಗೆ ಬಂದ ನಂತರದಲ್ಲಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಬ್ಬರನ್ನು ಬಂಧಿಸಿರುವುದು ರಾಷ್ಟ್ರದಲ್ಲೇ ಮೊದಲು ಎನ್ನಲಾಗಿದೆ.

    ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಭರತ್​ಪುರ ಎಎಸ್​ಪಿ ಸುರೇಶ್​ ಖಿಂಚಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಇತ್ತೀಚೆಗಷ್ಟೇ ಜಾರಿಗೆ ಬಂದಿದೆ. ಇದರನ್ವಯ ಲಾಕ್​ಡೌನ್​ ಉಲ್ಲಂಘಿಸಿ, ಗುಟ್ಕಾ ಜಗಿದು ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ದಕ್ಕಾಗಿ ಇವರಿಬ್ಬರನ್ನೂ ಬಂಧಿಸಲಾಗಿತ್ತು. ಸ್ವಲ್ಪಕಾಲ ಜೈಲಿನಲ್ಲಿರಿಸಿ, ನಂತರ ಬಿಟ್ಟು ಕಳುಹಿಸಲಾಯಿತು ಎಂದು ಹೇಳಿದ್ದಾರೆ.

    ಬೇಸಿಗೆಗೂ ತಂಪು… ರೋಗನಿರೋಧಕ ಶಕ್ತಿಯೂ ಸೊಂಪು ಈ ಕೂಲ್​, ಕೂಲ್​ ಜ್ಯೂಸ್​; ಹೇಗೆ ಮಾಡುವುದು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts