ಎರಡು ಎಕರೆ ಬಾಳೆ ಫಸಲು ನಾಶ

blank

ಕೆ.ಎಂ.ದೊಡ್ಡಿ: ಬಿರುಗಾಳಿಯಿಂದಾಗಿ ದೇವರಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಬಾಳೆ ಫಸಲು ನಾಶವಾಗಿದೆ.

blank

ಗ್ರಾಮದ ಶಿವಮ್ಮ, ಪುಟ್ಟರಾಜು, ರಮೇಶ್ ಅವರಿಗೆ ಸೇರಿದ ಬಾಳೆ ಫಸಲು ಇದಾಗಿದ್ದು, ಬರಗಾಲದಲ್ಲೂ ಬಾಳೆ ಫಸಲನ್ನು ಪಂಪ್ ಸೆಟ್ ನೀರಿನ ಆಶ್ರಯದಲ್ಲಿ ಬೆಳೆಯಲಾಗಿತ್ತು. ಆದರೆ ಬಿರುಗಾಳಿಗೆ ಸಿಲುಕಿ ಬಾಳೆ ಬೆಳೆ ಮುರಿದು ಬಿದ್ದಿದೆ.

ಸಮೀಪದ ಯಲಾದಹಳ್ಳಿ ಗ್ರಾಮದಲ್ಲಿ ಮನೆಯ ಶೀಟ್‌ಗಳು ಗಾಳಿಗೆ ಹಾರಿ ಹೋಗಿವೆ. ಗ್ರಾಮದ ಅಂಗನವಾಡಿ ಸಹಾಯಕಿ ಗೌರಮ್ಮ ಅವರಿಗೆ ಸೇರಿದ ಮನೆ ಇದಾಗಿದೆ.

ಸಿಡಿಲಿಗೆ ತೆಂಗಿನ ತೋಟ ಭಸ್ಮ: ಸಮೀಪದ ಮುಟ್ಟನಹಳ್ಳಿ ಗ್ರಾಮದಲ್ಲಿ ಸಿಡಿಲಿಗೆ ತೆಂಗಿನ ತೋಟ ಭಸ್ಮವಾಗಿದೆ. ಗ್ರಾಮದ ಚಿಕ್ಕಹೈದೇಗೌಡ ಅವರು 1.15 ಎಕರೆ ಪ್ರದೇಶದಲ್ಲಿ ಹಾಕಿದ್ದ ತೆಂಗು ಭಸ್ಮವಾಗಿದೆ. ಬರಗಾಲದಲ್ಲಿ ಪಂಪಸೆಟ್ ಆಶ್ರಯಿಸಿ ತೆಂಗಿನ ತೋಟವನ್ನು ಉಳಿಸಿಕೊಂಡಿದ್ದು ಸಿಡಿಲಿಗೆ ಆಹುತಿಯಾಗಿದೆ.

Share This Article
blank

ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಈ ದೇಸಿ ಸೂಪರ್‌ಫುಡ್‌ ತಿನ್ನಿ | Immunity

Immunity: ಮಳೆಗಾಲ ಬಂತೆಂದರೆ ಸೋಂಕುಗಳು ಬರುವುದು ಸಹ ಸಹಜ. ತಂಪಾದ ಗಾಳಿಗೆ ಮನೆಗಳ ಸುತ್ತಲು ಬ್ಯಾಕ್ಟೀರಿಯಾ…

ಮಳೆಗಾಲದಲ್ಲಿ ಕಲುಷಿತ ಆಹಾರ, ನೀರಿನ ಮೂಲಕ ವೈರಸ್! ಎಚ್ಚರ ತಪ್ಪಿದರೆ ಅನಾರೋಗ್ಯ…monsoon

monsoon : ಮಳೆಗಾಲ  ಹವಾಮಾನದಲ್ಲಿನ ಬದಲಾವಣೆಗಳು  ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.  ಸೇವಿಸುವ ಆಹಾರ ಮತ್ತು…

blank