ತಿರುಮಲ: ವೈಕುಂಠ ಏಕಾದಶಿಯಂದು ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಉತ್ತರ ದ್ವಾರ ದರ್ಶನಕ್ಕೆ ವಿಸ್ತೃತವಾದ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಧರ್ಮಾ ರೆಡ್ಡಿ ತಿಳಿಸಿದ್ದಾರೆ.
ವೈಕುಂಠ ಏಕಾದಶಿ ಪ್ರಯುಕ್ತ ಡಿಸೆಂಬರ್ 23 ರಿಂದ ಭಕ್ತರಿಗೆ ಶ್ರೀವಾರಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಟಿಡಿ ವ್ಯವಸ್ಥೆ ಮಾಡುತ್ತಿದೆ. ಡಿ.23ರಿಂದ ಜನವರಿ 1ರವರೆಗೆ 10 ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಲು ವ್ಯಾಪಕ ವ್ಯವಸ್ಥೆ ಮಾಡಲಾಗುತ್ತಿದೆ. ಚಳಿಗಾಲ ಆಗಿರುವುದರಿಂದ ತಿರುಮಲ ಬೆಟ್ಟದಲ್ಲಿ ಚಳಿ ಜಾಸ್ತಿ ಆಗಿದೆ. ಶೀತ ಚಳಿಗಾಲದಲ್ಲಿ ಭಕ್ತರು ಸರತಿ ಸಾಲಿನಲ್ಲಿ ಕಾಯುವುದನ್ನು ತಪ್ಪಿಸಲು ಟೈಮ್ ಸ್ಲಾಟ್ ಟೋಕನ್ಗಳನ್ನು ನೀಡಲಾಗುತ್ತಿದೆ.
ಟೈಮ್ ಸ್ಲಾಟ್ ಟೋಕನ್: ಇದರಿಂದ ಭಕ್ತರು ಸರತಿ ಸಾಲಿನಲ್ಲಿ ಹೆಚ್ಚು ಸಮಯ ಕಳೆಯದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತಾದಿಗಳು ಸರದಿ ಸಾಲಿನಲ್ಲಿ ಹೆಚ್ಚು ಹೊತ್ತು ಕಾಯಬೇಕಿಲ್ಲ ಎಂಬ ಉದ್ದೇಶದಿಂದ ಟೈಮ್ ಸ್ಲಾಟ್ ಟೋಕನ್ ನೀಡಲಾಗುತ್ತಿದೆ. ಈ ಟೋಕನ್ ಹೊಂದಿರುವ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಶ್ರೀವಾಣಿ ದರ್ಶನ ಟಿಕೆಟ್ಗಳನ್ನು ಈಗಾಗಲೇ ಆನ್ಲೈನ್ನಲ್ಲಿ ದಿನಕ್ಕೆ 2000 ಟಿಕೆಟ್ಗಳ ದರದಲ್ಲಿ ಬಿಡುಗಡೆ ಮಾಡಲಾಗಿದ್ದು, ಡಿಸೆಂಬರ್ 22 ರಿಂದ ತಿರುಪತಿ ಮತ್ತು ತಿರುಮಲದಲ್ಲಿ 10 ಕೇಂದ್ರಗಳಲ್ಲಿ 94 ಕೌಂಟರ್ಗಳ ಮೂಲಕ ಒಟ್ಟು 4,23,500 ಟೋಕನ್ಗಳನ್ನು ಮಂಜೂರು ಮಾಡಲಾಗುವುದು ಎಂದು ತಿಳಿದುಬಂದಿದೆ.
ಈ ಟೋಕನ್ಗಳ ಕೇಂದ್ರಗಳೆಂದರೆ.. ತಿರುಪತಿಯ ಇಂದಿರಾ ಮೈದಾನ, ರಾಮಚಂದ್ರ ಪುಷ್ಕರಿಣಿ, ಶ್ರೀನಿವಾಸ ಕಾಂಪ್ಲೆಕ್ಸ್, ವಿಷ್ಣುನಿವಾಸಂ ಕಾಂಪ್ಲೆಕ್ಸ್, ಭೂದೇವಿ ಕಾಂಪ್ಲೆಕ್ಸ್, ಶ್ರೀ ಗೋವಿಂದರಾಜಸ್ವಾಮಿ ಎರಡನೇ ಸತ್ರಂ, ಭೈರಾಗಿಪಟ್ಟೇಡದ ರಾಮನಾಯ್ಡು ಶಾಲೆ, ಎಂ.ಆರ್.ಪಲ್ಲಿಯ ಜಿಲ್ಲಾ ಪರಿಷತ್ ಶಾಲೆ, ಜಿಲ್ಲಾ ಪರಿಷತ್ ಪ್ರೌಢಶಾಲೆ. ತಿರುಮಲದಲ್ಲಿ ಸ್ಥಳೀಯರಿಗಾಗಿ ಜೀವಕೋಣ, ಕೌಸ್ತುಭಂ ವಿಶ್ರಾಂತಿ ಮನೆಯಲ್ಲಿ ಟೋಕನ್ ಕೌಂಟರ್ಗಳನ್ನು ಸ್ಥಾಪಿಸಲಾಗುವುದು.