ಬೆಂಗಳೂರು: ಬೆಂಗಳೂರಲ್ಲಿ ಕದ್ದ ಈಚರ್ ಲಾರಿ ಮಂಡ್ಯದಲ್ಲಿ ಪತ್ತೆಯಾಗಿತ್ತು, ಲಾರಿ ನೋಡಿದ ಮಾಲೀಕ ಅದರ ಸ್ಥಿತಿ ಕಂಡು ಕ್ಷಣಕಾಲ ಬೆಚ್ಚಿಬಿದ್ದಿದ್ದಾನೆ.
ಮಾರುತಿ ಎಂಬುವರಿಗೆ ಸೇರಿದ ಕೆಎ 16 ಬಿ 0783 ನಂಬರ್ ನ ಈಚರ್ ವಾಹನವನ್ನು ಬೆಂಗಳೂರಿನಲ್ಲಿ ಕಳ್ಳತನ ಮಾಡಲಾಗಿತ್ತು. ಕದ್ದ ಲಾರಿ ಒಂದೇ ಒಂದು ರಾತ್ರೀಲಿ ಪೀಸ್ ಪೀಸ್ ಆಗಿದ್ದು, ಸ್ವತ ಮಾಲೀಕ ಮಾರುತಿ ಶಾಕ್ ಆಗಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 15 ರಂದು ರಾತ್ರಿ 2.45 ರ ಸುಮಾರಿಗೆ ಕೊಟ್ಟಿಗೆಪಾಳ್ಯದಲ್ಲಿ ನಿಲ್ಲಿಸಿದ್ದ ವಾಹನವನ್ನು ಕಳ್ಳತನ ಮಾಡಲಾಗಿತ್ತು. ಲಾರಿಯಲ್ಲಿ ಜಿಪಿಎಸ್ ಇದ್ದಿದ್ದರಿಂದ ಜಾಡು ಹಿಡಿದು ಪೊಲೀಸರು ಹೊರಟಿದ್ದರು. ಆದರೆ ಅಷ್ಟೊತ್ತಿಗಾಗಲೇ ಲಾರಿ ಮಂಡ್ಯ ತಲುಪಿತ್ತು.
ಪ್ರಕರಣ ಬೆನ್ನಟ್ಟಿದ್ದ ಪೊಲೀಸರು, ಮಂಡ್ಯದ ಗ್ಯಾರೇಜ್ ವೊಂದರಲ್ಲಿ ಲಾರಿಯನ್ನು ಪತ್ತೆ ಹಚ್ಚಿದ್ದಾರೆ. ಆದರೆ ಈಚರ್ ವಾಹನವನ್ನು ಸಂಪೂರ್ಣ ಕಟ್ ಮಾಡಲಾಗಿತ್ತು. ಈ ಸಂಬಂಧ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿ ಮಜರ್ ಅಹಮ್ಮದ್ ನನ್ನು ಬಂಧಿಸಿದ್ದಾರೆ.
ಅಪ್ಪು 5ನೇ ತಿಂಗಳ ಪುಣ್ಯತಿಥಿ; ಕುಟುಂಬಸ್ಥರಿಂದ ಪೂಜೆ, ನಿರ್ದೇಶಕ ಆರ್ಜಿವಿ ಭೇಟಿ