More

    ತೊಟ್ಟಿಲ ಕಾರ್ಯಕ್ಕೆ ಹೊರಟಿದ್ದ ಟ್ರಾೃಕ್ಟರ್ ಪಲ್ಟಿ

    ಹಾನಗಲ್ಲ: ತೊಟ್ಟಿಲ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಟ್ರಾೃಕ್ಟರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಒಬ್ಬ ಸ್ಥಳದಲ್ಲೇ ಮೃತಪಟ್ಟು, 8 ಜನರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ಅರಳೇಶ್ವರ ಗ್ರಾಮದ ಸಮೀಪ ಬುಧವಾರ ನಡೆದಿದೆ.
    ರಮೇಶ ಕೆಂಚಪ್ಪ ಪುಟ್ಟಣ್ಣನವರ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾಲೂಕಿನ ಬಿದರಕೊಪ್ಪ ಗ್ರಾಮದಿಂದ ಕಾಲ್ವೆಕಲ್ಲಾಪುರ ಗ್ರಾಮಕ್ಕೆ ಮಗುವಿನ ತೊಟ್ಟಿಲ ಕಾರ್ಯಕ್ರಮಕ್ಕೆ ಕುಟುಂಬದವರೆಲ್ಲ ತೆರಳುತ್ತಿದ್ದ ಟ್ರಾೃಕ್ಟರ್ ಉರುಳಿ ಬಿದ್ದಿದೆ. ಮೃತನ ಸಹೋದರ ಉಮೇಶ ಅವರ ಪುತ್ರನ ನಾಮಕರಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಜರುಗಿದೆ. ಸುಮಾರು 20 ಜನರು ಟ್ರಾೃಕ್ಟರ್‌ನಲ್ಲಿ ತೆರಳುತ್ತಿದ್ದರು. ಗಾಯಗೊಂಡವರನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸಿಪಿಐ ಎಸ್.ಆರ್. ಶ್ರೀಧರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts