More

    ತೋಂಟದಾರ್ಯ ಮಠದ ಜಾತ್ರಾ ಮಂಗಲೋತ್ಸವ ಕಾರ್ಯಕ್ರಮ

    ವಿಜಯವಾಣಿ ಸುದ್ದಿಜಾಲ ಗದಗ
    ಜನರನ್ನು ಆಕರ್ಷಣೆ ಮಾಡುವ ಜಾತ್ರೆಗಳು ನಾಡಿನಲ್ಲಿ ಸಾಕಷ್ಟು ಇರಬಹುದು. ಆದರೆ, ಅವೆಲ್ಲಕ್ಕೂ ಭಿನ್ನವಾಗಿ ತೋಂಟದಾರ್ಯ ಮಠದ ಜಾತ್ರೆಯು ಆಕರ್ಷಣೆಯ ಜಾತ್ರೆಯಾಗದೇ ಆದರ್ಶದ ಜಾತ್ರೆಯಾಗಿದೆ ಎಂದು ಮಣಕವಾಡ ದೇವಮಂದಿರ ಮಹಾಮಠದ ಅಭಿನವ ಮೃತ್ಯುಂಜಯ ಶ್ರೀಗಳು ಹೇಳಿದರು.
    ಇತ್ತೀಚೆಗೆ ನಗರದ ತೋಂಟದಾರ್ಯ ಮಠದ 2024ನೇ ಸಾಲಿನ ಜಾತ್ರಾ ಮಹೋತ್ಸವದ ಮಂಗಲೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, 12ನೇ ಶತಮಾನದಲ್ಲಿ ಬಸವೇಶ್ವರರು ಕಲ್ಯಾಣದ ಮಂತ್ರಿಯಾಗಿ ಇನ್ನೊಂದು ರಾಜ್ಯವನ್ನು ಕಟ್ಟುವಷ್ಟು ಸಶಕ್ತರಾಗಿದ್ದರು. ಆದರೆ ಅವರು ಭೌತಿಕ ಸಿರಿ ಸಂಪತ್ತಿನ ರಾಜ್ಯವನ್ನು ಕಟ್ಟದೇ ಜ್ಞಾನದ ರಾಜ್ಯವನ್ನು ನಿಮಿರ್ಸಿದರು. ಬಸವೇಶ್ವರರು ಬರುವ ಪೂರ್ವದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಮಹಿಳೆಯರಿಗೆ ಯಾವುದೇ ಸಾಮಾಜಿಕ ಸ್ಥಾನಮಾನ ಇದ್ದಿಲ್ಲ ಎಂಬುದು ಅಚ್ಚರಿಯಾದರೂ ನಿಜ. ಇಂದು ಬಸವತತ್ವವನ್ನು ಬಾಯಲ್ಲಿ ಹೇಳುತ್ತಾ ಅದನ್ನು ರ್ಪೂಣಪ್ರಮಾಣದಲ್ಲಿ ಅಳವಡಿಸಿಕೊಳ್ಳಲು ಹಿಂಜರಿಯುವ ಜನರಿರುವಾಗ ಲಿಂ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಅರಶ: ಬಸವತತ್ವವನ್ನು ಪಾಲಿಸಿದ್ದರು. ಅನೇಕ ಧಾಮಿರ್ಕ ನಾಯಕರನ್ನು ಬೆಳೆಸಿದ ಲಿಂಗೈಕ್ಯ ಗುರುಗಳು ನಾನು ವಟುವಾಗಿದ್ದಾಗ ಕಾಣಿಕೆ ನೀಡಿ ಆಶೀರ್ವದಿಸಿದ್ದರು ಎಂದು ಸ್ಮರಿಸಿದರು.
    ಇಳಕಲ್​ದ ಗುರುಮಹಾಂತ ಶ್ರೀಗಳು ಮಾತನಾಡಿ, ಒಂದು ಕಾಲದಲ್ಲಿ ರಾಜರ ಆಶ್ರಯದಲ್ಲಿ ಸಿರಿ ಸಂಪತ್ತುಗಳಿಂದ ವೈಭವಯುತವಾಗಿದ್ದ ತೋಂಟದಾರ್ಯ ಮಠವು ಸಿದ್ಧಲಿಂಗ ಶ್ರೀಗಳು ಪೀಠವನ್ನೇರುವ ಮುನ್ನ ಅರಶ: ಬರಡಾಗಿತ್ತು. ನಾಲ್ಕು ದಶಕಗಳ ಕಾಲ ಅವಿರತ ಶ್ರಮಿಸಿದ ಸಿದ್ಧಲಿಂಗ ಶ್ರೀಗಳು ಮಠಕ್ಕೆ ಹಳೆಯ ವೈಭವದ ಜೊತೆಗೆ ರಾಷ್ಟ್ರೀಯ ಮಟ್ಟದ ಖ್ಯಾತಿಯನ್ನು ತಂದುಕೊಟ್ಟರು. ಬಸವತತ್ವಗಳ ನಿಜಾಚರಣೆಗಳನ್ನು ಪಾಲಿಸುತ್ತಿದ್ದ ಗುರುಗಳು ನಮಗೆಲ್ಲ ಮಾದರಿಯಾಗಿದ್ದು, ಲಿಂಗಾಯತ ಮಠಗಳು ತಮ್ಮ ನಿಜಾಚರಣೆಯನ್ನು ಮರೆಯದೇ ಸಮಾಜಕ್ಕೆ ಅವುಗಳ ಮೌಲ್ಯವನ್ನು ಪಸರಿಸಬೇಕಿದೆ ಎಂದರು.
    ಡಾ.ತೋಂಟದ ಸಿದ್ಧರಾಮ ಶ್ರೀಗಳು ಸಾನಿಧ್ಯವಹಿಸಿದ್ದರು. ನಾಗನೂರು ರುದ್ರಾಮಠದ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು, ಜಡೆಸಿದ್ಧೇಶ್ವರ ಬಿಲ್ವಾಶ್ರಮದ ಡಾ.ಮಹಾಂತ ಸಿದ್ಧೇಶ್ವರ ಸ್ವಾಮಿಗಳು, ಹೈದರಾಬಾದ್​ನ ಶಿವ ಹಂಸಾರೂಢ ಮಹಾಸ್ವಾಮಿಗಳು ಕಾರ್ಯಕ್ರಮದ ಸಮ್ಮುಖ ವಹಿಸಿದ್ದರು. ಗಡಹಿಂಗ್ಲಜ ಬಿಲ್ವಾಶ್ರಮದ ತಾಯಂದಿರು ಸಂಗೀತ ಕಾರ್ಯಕ್ರಮ ನೀಡಿದರು.
    ಆರ್​ಡಿಪಿಆರ್​ ವಿದ್ಯಾಥಿರ್ಗಳು ಮಲ್ಲಕಂಬ ಪ್ರದರ್ಶನ ನೀಡಿದರು. ಕೆ. ಎಚ್​. ಬೇಲೂರ, ಅಮರೇಶ ಚಾಗಿ, ಶ್ರೀದೇವಿ ಶೆಟ್ಟರ, ಶಿವಯ್ಯ ನಾಲತ್ವಾಡಮಠ, ಪ್ರವಿಣ ವಾರಕರ, ಗವಿಸಿದ್ಧಪ್ಪ ಗಾಣಿಗೇರ, ಚಂದ್ರಶೇಖರ ಇಟಗಿ, ತಿಮ್ಮರಡ್ಡಿ ಕೋನರಡ್ಡಿ, ವಿಶ್ವನಾಥ ಹಳ್ಳಿಕೇರಿ, ಅಜಯ ಮುನವಳ್ಳಿ, ಎಂ.ಎಸ್​. ಅಂಗಡಿ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts