ಕೊಲ್ಕತ: ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ತಿಂಗಳುಗಳು ಬಾಕಿಯಿರುವಾಗಲೇ ಹಿಂಸಾಚಾರದ ಪ್ರಕರಣಗಳು ಹೆಚ್ಚಾಗಲಾರಂಭಿಸಿವೆ. ಶನಿವಾರ ಮಧ್ಯ ರಾತ್ರಿ ಸಮಯದಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನ ಮನೆಗೆ ಟಿಎಂಸಿ ಕಾರ್ಯಕರ್ತರು ನುಗ್ಗಿದ್ದು, ಅಮ್ಮ ಮಗನ ಮೇಲೆ ಹಲ್ಲೆ ಮಾಡಿದ್ದಾರೆ.
ಡುಮ್ಡಮ್ನ ನಿಮ್ಟಾದಲ್ಲಿರುವ ಮಸುಂದಾರ್ ಹೆಸರಿನ ಬಿಜೆಪಿ ಕಾರ್ಯಕರ್ತನ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಮಧ್ಯ ರಾತ್ರಿ ಸುಮಾರು 1.30ರ ಸಮಯಕ್ಕೆ ಟಿಎಂಸಿಯ ಕಾರ್ಯಕರ್ತರು ನಮ್ಮ ಮನೆಗೆ ನುಗ್ಗಿದರು. ನನ್ನ ಮೇಲೆ ಮತ್ತು ನನ್ನ ತಾಯಿಯ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿದರು ಎಂದು ಮಸುಂದಾರ್ ಅವರು ತಿಳಿಸಿದ್ದಾರೆ.
ಮಸುಂದಾರ್ ಅವರ ತಲೆಗೆ ಬಲವಾಗಿ ಏಟು ಬಿದ್ದಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಆನ್ಲೈನ್ ರಮ್ಮಿ ಆಟಕ್ಕೆ ಬ್ರೇಕ್! ಇನ್ನು ಮುಂದೆ ಈ ರಾಜ್ಯದಲ್ಲಿ ಆನ್ಲೈನ್ ಜೂಜಾಡುವಂತಿಲ್ಲ
‘ಧೈರ್ಯವಿದ್ದರೆ ಕಿಸಾನ್ ಬಾತ್, ಜಾಬ್ ಕಿ ಬಾತ್ ಮಾಡಿ’ ಮೋದಿಗೆ ಸವಾಲೆಸೆದ ರಾಹುಲ್ ಗಾಂಧಿ