ಬೀರೂರು: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಸೋಮವಾರ ಮಧ್ಯಾಹ್ನ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ನಲ್ಲಿದ್ದ ಅಜ್ಜ ಮಲ್ಲಪ್ಪ (60) ಮತ್ತು ಮೊಮ್ಮಗ ಉತ್ಸವ್ (10) ದಾರುಣವಾಗಿ ಸಾವನ್ನಪ್ಪಿದ್ದಾರೆ.
ಬಳ್ಳಿಗನೂರು ವಾಸಿ ಮಲ್ಲಪ್ಪ ಬಿಸಲೇಹಳ್ಳಿಯ ತನ್ನ ಮಗಳು ಸುನೀತಾ ಮನೆಗೆಂದು ತೆರಳಿ ಮೊಮ್ಮಗ ಉತ್ಸವ್ನನ್ನು ಕರೆದುಕೊಂಡು ಹಿಂದಿರುಗುತ್ತಿದ್ದಾಗ ಬೀರೂರು ಕಡೆಯಿಂದ ವೇಗವಾಗಿ ತೆರಳುತ್ತಿದ್ದ ಟಿಪ್ಪರ್ ಲಾರಿ ಚಾಲಕ ಬೀರೂರು- ಕಡೂರು ಮಾರ್ಗ ಮಧ್ಯೆ ಇರುವ ರಾಮದೇವ್ ಸ್ಟೀಲ್ಸ್ ಸಮೀಪ ಬೈಕ್ಗೆ ಡಿಕ್ಕಿ ಹೊಡೆದಿದ್ದಾನೆ.
ಮಲ್ಲಪ್ಪನವರ ಮಗ ರವಿಕುಮಾರ್ ಬೆಂಗಳೂರಲ್ಲಿ ಸಣ್ಣ ಕೈಗಾರಿಕೆಯೊಂದನ್ನು ನಡೆಸುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಪತ್ನಿ ಸುನೀತಾ ಅವರ ಸ್ವಗ್ರಾಮ ಬಿಸಲೇಹಳ್ಳಿಯಲ್ಲಿ ಮಗನನ್ನು ಬಿಟ್ಟಿದ್ದರು. ಅಜ್ಜನ ಮನೆ ಬಳ್ಳಿಗನೂರಿನಲ್ಲಿ ಹಸು ಕರು ಹಾಕಿದ ಸಂಭ್ರಮಕ್ಕೆ ಅಜ್ಜನೊಂದಿಗೆ ತೆರಳುತ್ತಿದ್ದ ಸಂದರ್ಭ ಈ ದುರ್ಘಟನೆ ನಡೆದಿದೆ. ಲಾರಿಯಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.