More

    ಭೀಕರ ಅಪಘಾತ: ಕಾರು ಲಾರಿಗೆ ಅಪ್ಪಳಿಸಿ ಮೂವರು ಸ್ಥಳದಲ್ಲೇ ಸಾವು..

    ಚಿತ್ರದುರ್ಗ: ಅಪಘಾತಕ್ಕೀಡಾದ ಕಾರು ಲಾರಿಗೆ ಅಪ್ಪಳಿಸಿದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮಹಿಳೆಯರು ಹಾಗೂ ಪುರುಷರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಚಿತ್ರದುರ್ಗದ ಹೊರವಲಯದ ಸೀಬಾರ ಬಳಿ ಈ ಅಪಘಾತ ಸಂಭವಿಸಿದೆ. ಕಾರು ರಸ್ತೆ ವಿಭಜಕ್ಕೆ ಡಿಕ್ಕಿಯಾಗಿ ಬಳಿಕ ಲಾರಿಗೆ ಅಪ್ಪಳಿಸಿದೆ. ಕಾರು ಚಿತ್ರದುರ್ಗದಿಂದ ದಾವಣಗೆರೆ ಕಡೆಗೆ ತೆರಳುತ್ತಿದ್ದು, ಲಾರಿ ಬೆಂಗಳೂರು ಕಡೆಗೆ ಸಾಗುತ್ತಿತ್ತು.

    ಲಾರಿಯಲ್ಲಿದ್ದ ಒಬ್ಬರು ಹಾಗೂ ಕಾರಿನಲ್ಲಿದ್ದ ಇಬ್ಬರು ಗಾಯಾಳುಗಳನ್ನು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿ 9.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಮೃತರನ್ನು ಬೆಂಗಳೂರು ರಾಜಾಜಿನಗರದ ನಿವಾಸಿಗಳಾದ ಮನೀಷ್ (40), ಸಿಂಚನಾ(35) ಹಾಗೂ ಭೂಮಿಕಾ (19) ಎಂದು ಗುರುತಿಸಲಾಗಿದೆ. ಕನಗುಮುತ್ತು, ಗಿರೀಧರ್ ಹಾಗೂ ಕಿರಣ್ ಗಾಯಾಳುಗಳೆಂದು ಗುರುತಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಎಸ್​ಪಿ ಕೆ. ಪರಶುರಾಮ್ ತಿಳಿಸಿದ್ದಾರೆ.

    ಭೀಕರ ಅಪಘಾತ: ಕಾರು ಲಾರಿಗೆ ಅಪ್ಪಳಿಸಿ ಮೂವರು ಸ್ಥಳದಲ್ಲೇ ಸಾವು..

    ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಮಾಜಿ ಉಪ ಮುಖ್ಯಮಂತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts