ಕೇರಳ: ತಮ್ಮ ರಾಜ್ಯದಲ್ಲಿ ಬಿ.ಎಸ್ಸಿ ನರ್ಸಿಂಗ್ ಕೋರ್ಸ್ಗಳನ್ನು ಮಾಡುವ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಇದೀಗ ಕೇರಳ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಹಾಕಿ ನಮ್ಮೆಯ ಅನುದಾನ ಮಾಜಿ ಶಾಸಕರ ಪ್ರಯತ್ನದಿಂದ ಲಭಿಸಿದೆ: ಮನುಮುತ್ತಪ್ಪ
“ನರ್ಸಿಂಗ್ ಕ್ಷೇತ್ರದಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ನೀಡಲಾಗಿದ್ದು, ಬಿಎಸ್ಸಿ ನರ್ಸಿಂಗ್ ಕೋರ್ಸ್ನಲ್ಲಿ ಒಂದು ಸೀಟು ಮತ್ತು ಜನರಲ್ ನರ್ಸಿಂಗ್ ಕೋರ್ಸ್ನಲ್ಲಿ ಒಂದು ಸೀಟು ನೀಡಲಾಗಿದೆ. ನರ್ಸಿಂಗ್ ಕ್ಷೇತ್ರದಲ್ಲಿ ಟ್ರಾನ್ಸ್ಜೆಂಡರ್ಗೆ ಮೀಸಲಾತಿ ಕಲ್ಪಿಸಿರುವುದು ಇತಿಹಾಸದಲ್ಲಿ ಇದೇ ಮೊದಲು” ಎಂದು ಆರೋಗ್ಯ ಸಚಿವೆ ಹೇಳಿದ್ದಾರೆ.
“ಕೇರಳ ಸರಕಾರವು ಟ್ರಾನ್ಸ್ಜೆಂಡರ್ ಸಮುದಾಯದ ಉನ್ನತಿಗಾಗಿ ಮಹತ್ತರವಾದ ಕೆಲಸವನ್ನು ಮಾಡುತ್ತಿದೆ, ಇದರ ಮುಂದುವರಿದ ಭಾಗವಾಗಿ, ಆರೋಗ್ಯ ಕ್ಷೇತ್ರದಲ್ಲೂ ತೃತೀಯ ಸಮುದಾಯದ ಪ್ರಾತಿನಿಧ್ಯವನ್ನು ಖಾತ್ರಿಪಡಿಸಲಾಗುವುದು” ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ,(ಏಜೆನ್ಸೀಸ್).
‘ಆದಿಪುರುಷ್’ ಸೋಲಿನ ನಂತರ ಹೊಸ ಸ್ಕಿನ್ಕೇರ್ ಬ್ರಾಂಡ್ ಲಾಂಚ್ ಮಾಡಿದ ನಟಿ ಕೃತಿ ಸನೋನ್!