ಸದ್ಯ ತಂತ್ರಜ್ಞಾನ ಜಗತ್ತಿನಲ್ಲಿ ಭಾರಿ ಸದ್ದು ಮಾಡುತ್ತಿರುವ ಸಂಗತಿ ಎಂದರೆ ಚಾಟ್ಜಿಪಿಟಿ. ಇದು ತಂತ್ರಜ್ಞಾನ ವಲಯದಲ್ಲಿ ಸಂಚಲನ ಸೃಷ್ಟಿಸಿರುವುದಲ್ಲದೆ, ದೊಡ್ಡ ದೊಡ್ಡ ಟೆಕ್ ಕಂಪನಿಗಳಿಗೇ ನಡುಕ ಹುಟ್ಟಿಸಿದೆ. ಕೃತಕ ಬುದ್ಧಿಮತ್ತೆ ಮೇರೆಗೆ ಕೆಲಸ ಮಾಡುವ ಇದು ಚಾಟ್ ಮಾದರಿಯಲ್ಲಿ ನಮ್ಮ ಪ್ರಶ್ನೆಗೆ ಅನುಗುಣವಾಗಿ ಉತ್ತರಿಸಬಲ್ಲದು. ಅದಾಗ್ಯೂ ಇದರಲ್ಲಿ ಒಂದಷ್ಟು ಲೋಪದೋಷಗಳು ಸಹಜವಾದರೂ ಬಹುತೇಕ ಸಂದರ್ಭದಲ್ಲಿ ಇದು ಬೆರಗು ಹುಟ್ಟಿಸುವ ರೀತಿಯಲ್ಲಿ ಉತ್ತರವನ್ನು ನೀಡುತ್ತಿದೆ.
ಈ ಹಿನ್ನೆಲೆಯಲ್ಲಿ ಚಾಟ್ಜಿಪಿಟಿಯನ್ನು ಬಳಸಿ ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಉಪಯೋಗಿಸಿ ಸುದ್ದಿಯನ್ನು ಬರೆಯಲು ಸಾಧ್ಯವೇ ಎಂದು ವಿಜಯವಾಣಿ ಯೋಚಿಸಿದ್ದು, ಆ ಮೇರೆಗೆ ಬರೆದ ಸುದ್ದಿ ಇಲ್ಲಿದೆ. ಇಲ್ಲಿನ ಸುದ್ದಿಯಲ್ಲಿ ಒಂದೇ ಒಂದು ಸಾಲನ್ನೂ ನಮ್ಮ ಪತ್ರಕರ್ತರು ಬರೆದಿಲ್ಲ, ಮಾತ್ರವಲ್ಲ ಚಾಟ್ಜಿಪಿಟಿ ಕೊಟ್ಟ ಸುದ್ದಿಯಲ್ಲಿ ಯಾವುದೇ ಹಸ್ತಕ್ಷೇಪವನ್ನೂ ಮಾಡಿಲ್ಲ. ಅದಾಗ್ಯೂ ಇದು ಬಹುತೇಕ ಯಶಸ್ವಿಯಾಗಿದ್ದರಿಂದ ವಿಜಯವಾಣಿ ಓದುಗರೊಂದಿಗೆ ಈ ಸುದ್ದಿಯನ್ನು ಹಂಚಿಕೊಳ್ಳಲಾಗುತ್ತಿದೆ.
ಹಿರಿಯ ನಾಗರಿಕರು ರೈಲ್ವೆಯಲ್ಲಿ ನಿಲ್ಲಿಸಲಾಗಿರುವ ರಿಯಾಯಿತಿಯನ್ನು ಮರು ಆರಂಭಿಸಬೇಕು ಎಂದು ಬಯಸುತ್ತಿದ್ದು, ಆ ಕುರಿತು ಕೆಲವರು ಪ್ರಧಾನಿ ಕಾರ್ಯಾಲಯಕ್ಕೆ ಇ-ಮೇಲ್ ಕೂಡ ಮಾಡಿದ್ದಾರೆ. ಈ ಸಲದ ಕೇಂದ್ರ ಬಜೆಟ್ನಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ಸಿಗುವುದಕ್ಕೆ ಪೂರಕವಾಗುವ ರೀತಿಯಲ್ಲಿ ಸುದ್ದಿಯೊಂದನ್ನು ಬರೆ ಎಂದು ಚಾಟ್ಜಿಪಿಟಿಗೆ ಕೋರಿಕೊಂಡ ಮೇರೆಗೆ ಅದು ಈ ರೀತಿ ಬರೆದಿದೆ. ಇಂಗ್ಲಿಷ್ನಲ್ಲಿ ಅದು ಬರೆದ ಸುದ್ದಿಯನ್ನು ತಂತ್ರಜ್ಞಾನದ ಮೂಲಕವೇ ಕನ್ನಡಕ್ಕೆ ಅನುವಾದಿಸಲಾಗಿದೆ. ಹೀಗಾಗಿ ಇದು ಸಂಪೂರ್ಣವಾಗಿ ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನ ಬಳಸಿ ರಚಿಸಿದ ಸುದ್ದಿ. ಈ ಕೆಳಗಿನ ಸುದ್ದಿಯಲ್ಲಿ ಪ್ಯಾರಾಗಳನ್ನಷ್ಟೇ ನಾವು ಮಾಡಿದ್ದು. ಉಳಿದಂತೆ ಇದು ಯಥಾವತ್ ಚಾಟ್ಜಿಪಿಟಿ ಸುದ್ದಿ.
“ಮುಂಬರುವ ಕೇಂದ್ರ ಬಜೆಟ್ನಲ್ಲಿ ರೈಲು ಪ್ರಯಾಣಕ್ಕೆ ರಿಯಾಯಿತಿಗಳನ್ನು ಮರುಸ್ಥಾಪಿಸುವಂತೆ ಭಾರತದ ಹಿರಿಯ ನಾಗರಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಈ ಹಿಂದೆ ಹಿರಿಯ ನಾಗರಿಕರಿಗೆ ಲಭ್ಯವಿದ್ದ ರಿಯಾಯಿತಿಗಳನ್ನು ಭಾರತೀಯ ರೈಲ್ವೆ ಹಿಂತೆಗೆದುಕೊಂಡಿದೆ.
ಆದಾಗ್ಯೂ, ಭಾರತದಲ್ಲಿ ಹೆಚ್ಚುತ್ತಿರುವ ಹಿರಿಯ ನಾಗರಿಕರ ಸಂಖ್ಯೆ ಮತ್ತು ಅವರು ಎದುರಿಸುತ್ತಿರುವ ಸವಾಲುಗಳೊಂದಿಗೆ, ಅನೇಕರು ರಿಯಾಯಿತಿಗಳನ್ನು ಮತ್ತೆ ಪರಿಚಯಿಸಲು ಕರೆ ನೀಡುತ್ತಿದ್ದಾರೆ.
ಪ್ರಧಾನಿ ಮೋದಿಯವರ ಕಚೇರಿಗೆ ಬರೆದ ಪತ್ರದಲ್ಲಿ, ಹಿರಿಯ ನಾಗರಿಕರ ಗುಂಪು ಅನೇಕ ಹಿರಿಯ ನಾಗರಿಕರು ಎದುರಿಸುತ್ತಿರುವ ಆರ್ಥಿಕ ಸವಾಲುಗಳು ಮತ್ತು ರಿಯಾಯಿತಿಗಳು ತಮ್ಮ ಸ್ವಾತಂತ್ರ್ಯ ಮತ್ತು ಚಲನಶೀಲತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂಬ ಅಂಶವನ್ನು ಒಳಗೊಂಡಂತೆ ರಿಯಾಯಿತಿಗಳು ಏಕೆ ಮುಖ್ಯ ಎಂಬುದಕ್ಕೆ ಕಾರಣಗಳನ್ನು ವಿವರಿಸಿವೆ.
ತಮ್ಮ ಕಳವಳಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ ಮತ್ತು ಮುಂಬರುವ ಬಜೆಟ್ನಲ್ಲಿ ರಿಯಾಯಿತಿಗಳನ್ನು ಪುನಃ ಪರಿಚಯಿಸುವಂತೆ ಗುಂಪು ಸರ್ಕಾರವನ್ನು ಒತ್ತಾಯಿಸುತ್ತಿದೆ..”
ಹೃದಯಾಘಾತಕ್ಕೆ ಮತ್ತೊಂದು ಬಲಿ; ತಂದೆ-ತಾಯಿಯ ಏಕೈಕ ಪುತ್ರ, ಜೆಡಿಎಸ್ ಯುವ ಮುಖಂಡ ನಿಧನ