More

    12 ವರ್ಷ ತಲೆಮರೆಸಿಕೊಂಡಿದ್ದ ಕಳ್ಳರು ಕೊನೆಗೂ ಸಿಕ್ಕಿಬಿದ್ರು; ಇವರು ಕಳವು ಮಾಡುತ್ತಿದ್ದುದೇ ಆ ಎರಡು ಸಂದರ್ಭಗಳಲ್ಲಿ…

    ಬೆಂಗಳೂರು: ಎರಡೇ ಎರಡು ಸಂದರ್ಭವನ್ನು ತಮ್ಮ ಕೈಚಳಕ ತೋರಲು ಸೂಕ್ತ ಸಮಯ ಎಂದುಕೊಂಡು ಸಾಮಾನ್ಯವಾಗಿ ಆ ಹೊತ್ತಲ್ಲಿ ಮಾತ್ರ ಕಳವು ಮಾಡುತ್ತಿದ್ದ ಈ ಕಳ್ಳರು 12 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದರು. ಇದೀಗ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ.

    ಮುರಳಿ ಅಲಿಯಾಸ್​ ಪ್ರಾಜೆಕ್ಟ್ ಮುರಳಿ, ಶಿವರಾಮು ಹಾಗೂ ಸಿರಾಜ್ ಬಂಧಿತ ಆರೋಪಿಗಳು. ಮೇಲಿಂದ ಮೇಲೆ ಹಲವು ಕಳ್ಳತನವನ್ನು ಎಸಗಿದ್ದರೂ ಇವರು 12 ವರ್ಷಗಳ ಕಾಲ ಪೊಲೀಸರ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದರು. ಆದರೆ ಬೆಂಗಳೂರಿನ ಡಿ.ಜೆ. ಹಳ್ಳಿ ಪೊಲೀಸರ ಕಾರ್ಯಾಚರಣೆಯಲ್ಲಿ ಇವರು ಸಿಕ್ಕಿಬಿದ್ದಿದ್ದಾರೆ.

    ಪಾಲಕರು ಮಕ್ಕಳನ್ನು ಶಾಲೆಗೆ ಬಿಡಲು ಅಥವಾ ಶಾಲೆಯಿಂದ ಕರೆತರಲು ಹೋಗಿದ್ದ ಸಂದರ್ಭವನ್ನು ನೋಡಿ ಇವರು ಕಳ್ಳತನ ಮಾಡುತ್ತಿದ್ದರು. ಈ ಆರೋಪಿಗಳ ಬಂಧನದಿಂದ ಸದ್ಯ 13 ಪ್ರಕರಣಗಳು ಬೆಳಕಿಗೆ ಬಂದಿವೆ. ಆರೋಪಿಗಳಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 7 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಒಂದು ವರ್ಷದ ಮಗುವಿಗೆ ವಿಷ ಉಣಿಸಿ ಅಪ್ಪ-ಅಮ್ಮ ಆತ್ಮಹತ್ಯೆ; ‘ಮೂವರನ್ನೂ ಒಟ್ಟಿಗೇ ಮಣ್ಣು ಮಾಡಿ, ಖುಷಿಯಿಂದ ಕಳಿಸಿಕೊಡಿ..’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts