ಬೆಂಗಳೂರು: ಕಳ್ಳಕಾಕರನ್ನು ಹುಡುಕಿ ಕಾನೂನು ಕ್ರಮ ತೆಗೆದುಕೊಳ್ಳುವ ಪೊಲೀಸರು ವಾಸಿಸುವ ಪೊಲೀಸ್ ಕ್ವಾರ್ಟರ್ಸ್ಗೇ ಕಳ್ಳರು ನುಗ್ಗಿ, ಪೊಲೀಸ್ ಸಿಬ್ಬಂದಿಯೋರ್ವರ ಮನೆಯಿಂದ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ನಗರದಲ್ಲಿ ನಡೆದಿದೆ.
ಶೇಷಾದ್ರಿಪುರದ ಆನಂದ್ರಾವ್ ಸರ್ಕಲ್ನಲ್ಲಿರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಈ ಕೃತ್ಯ ನಡೆದಿದೆ. ತಾವು ಡ್ಯೂಟಿಗೆ ತೆರಳಿದ್ದ ಸಮಯ ನೋಡಿಕೊಂಡು ಕಳ್ಳತನ ಮಾಡಿರುವ ಬಗ್ಗೆ ಹೆಡ್ ಕಾನ್ಸ್ಟಬಲ್ ಆದ ಮಾರುತಿ ಶೇಷಾದ್ರಿಪುರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಕ್ವಾರ್ಟರ್ಸ್ನಲ್ಲಿ ಸಿಸಿಟಿವಿ ಇಲ್ಲದೆ ಇರುವುದು ಕಳ್ಳರಿಗೆ ಬಂಡವಾಳವಾಗಿರಬಹುದು ಎನ್ನಲಾಗಿದೆ.
ಇದನ್ನೂ ಓದಿ: ಬ್ಯಾಡರಹಳ್ಳಿ ಆತ್ಮಹತ್ಯೆ ಪ್ರಕರಣದಲ್ಲಿ ಹಲ್ಲೆಗೆರೆ ಶಂಕರ್, ಅಳಿಯಂದಿರ ಬಂಧನ
ಸೆ.27 ರಂದು 6 ಗಂಟೆಗೆ ಮನೆಯಿಂದ ಹೊರಟು ಭಾರತ್ ಬಂದ್ ಕರ್ತವ್ಯಕ್ಕೆ ಹಾಜರಾಗಿದ್ದ ಹೆಡ್ಕಾನ್ಸ್ಟೇಬಲ್ ಸ್ನೇಹಿತನ ಮನೆಯಲ್ಲೇ ತಂಗಿದ್ದು, ಮರುದಿನ ಬಂದು ನೋಡಿದಾಗ ಮುಂಬಾಗಿಲ ಬೀಗ ಒಡೆದಿತ್ತು. ಒಳಗೆ ಹೋಗಿ ನೋಡಿದರೆ ಬೀರುವಿನಲ್ಲಿದ್ದ ಚಿನ್ನ-ಬೆಳ್ಳಿ, ವಾಚು, ಮೊಬೈಲು ಸೇರಿ 85 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
ಕಾಂಗ್ರೆಸ್ನ ಐಎಸ್ಐ ಏಜೆಂಟ್ ಅಂದ್ರೆ ಏನ್ ಮಾಡ್ತಾರೆ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರಶ್ನೆ