More

    ಹಸಮಣೆಗೇರಬೇಕಿದ್ದ ಯುವತಿ ಅನುಮಾನಾಸ್ಪದವಾಗಿ ಸಾವು

    ವರನ ಮನೆಯಲ್ಲಿ ಐಶ್ವರ್ಯ ಮೃತದೇಹ ಪತ್ತೆ

    ಹೊಸಪೇಟೆ: ಎರಡು ದಿನಗಳಲ್ಲಿ ಹಸಮಣೆಗೇರಬೇಕಿದ್ದ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

    ಐಶ್ವರ್ಯ ಮೃತಪಟ್ಟ ಯುವತಿ. ಘಟನೆ ಸಂಬಂಧ ವರ ಅಶೋಕ್, ಆತನ ಸಂಬಂಧಿಕರಾದ ಅಂಬರೀಶ್ವರನ್ ಕೃಷ್ಣವೇಣಿ, ರಾಜೇಶ್ವರಿ ಲೋಗನಾದನ್, ರಘು ವಿರುದ್ಧ ಟಿಬಿ ಡ್ಯಾಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಘಟನೆ ವಿವರ: ಟಿಬಿ ಡ್ಯಾಮ್ ನ ಐಶ್ವರ್ಯ ಎಂಬ ಯುವತಿ ಸ್ಥಳೀಯ ನಿವಾಸಿ ಅಶೋಕ್ ಎಂಬಾತನನ್ನು ಕಳೆದ 7-8 ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಯುವತಿ ಕೆಳ ಸಮುದಾಯದವಳು ಎಂಬ ಕಾರಣಕ್ಕೆ ವರನ ಕುಟುಂಬಸ್ಥರು ಅಂತರ್ಜಾತಿ ವಿವಾಹಕ್ಕೆ ವಿರೋಧಿಸಿದ್ದರು. ಆದರೆ, ಅಶೋಕ್ ಪಟ್ಟು ಮುಂದುವರಿಸಿದ್ದರಿಂದ ಪ್ರೇಮ ವಿವಾಹಕ್ಕೆ ಪೋಷಕರು ಒಪ್ಪಿಗೆ ಸೂಚಿಸಿದ್ದರು. ನ.23 ರಂದು ಮದುವೆ ನಿಶ್ಚಯಿಸಿ ಇಲ್ಲಿನ ಶ್ರೀ ಸಾಯಿಲಿಲ್ಲ ಕಲ್ಯಾಣ ಮಂಟಪದಲ್ಲಿ ನೆರವೇರಿಸಲು ನಿರ್ಧರಿಸಿದ್ದರು.

    ಆದರೆ ಮದುವೆಗೆ ವಧುವಿನ ತಂದೆ ಮತ್ತು ತಂಗಿ ಮಾತ್ಯರ ಬರಬೇಕು. ಕುಟುಂಬಸ್ಧರು, ಸಂಬಧೀಕರು ಬರುವಂತಿಲ್ಲ. ಮದುವೆಗೆ ಒಂದು ವಾರ ಮುನ್ನವೇ ಐಶ್ವರ್ಯಗಳನ್ನು ವರನ ಮನೆಗೆ ಕಳುಹಿಸಿಕೊಡಬೇಕು ಎಂಬ ಷರತ್ಶತು ವಿಧಿಸಿದ್ದರು. ಅದರಂತೆ ಮದುವೆಗೆ ಮುನ್ನವೇ ಯುವತಿಯನ್ಹೊನು ವರನ ಮನೆಗೆ ಕಳಿಸಿಕೊಡಲಾಗಿತ್ತು. ಆದರೆ ಐಶ್ವರ್ಯ ಕೆಳ ಜಾತಿಯವಳು ಎಂದು ವರನ ಕುಟುಂಬಸ್ಥರು ನಿಂದಿಸಿ, ಹಿಂಸೆ ನೀಡುತ್ತಿದ್ದರು. ಅಲ್ಲದೇ, ಭಾನುವಾರ ಮಧ್ಯಾಹ್ನ 12 ಗಂಟೆಗೆ ಅನುಮಾನಾಸ್ಪದ ರೀತಿಯಲ್ಲಿ ಐಶ್ವರ್ಯ ಮೃತಪಟ್ಟಿದ್ದಾಳೆ. ಇದಕ್ಕೆ ಅಶೋಕ್ ಮತ್ತು ಅವರ ಕುಟುಂಬಸ್ಥರೇ ಕಾರಣ ಎಂದು ಆರೋಪಿಸಿ ಮೃತಳ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts