ಬೆಂಗಳೂರು: ದೇಶದಾದ್ಯಂತ ಹೋರಾಟ ನಡೆಸುತ್ತಿರುವ ಸಿಎಎ ವಿರೋಧಿ ಹೋರಾಟಗಾರರಿಗೆ ರಾಜ್ಯ ಬಿಜೆಪಿ ಸವಾಲೊಂದನ್ನು ಹಾಕಿದೆ.
ಇಂದು ಬೆಳಗ್ಗೆ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸವಾಲನ್ನು ಹಾಕಿರುವ ಬಿಜೆಪಿ, “ಪ್ರೀತಿಯ ಸಿಎಎ ವಿರೋಧಿ ಹೋರಾಟಗಾರರೇ. ಈ ಮಾನವೀಯ ಕಾಯ್ದೆಯಿಂದಾಗಿ ಯಾರು ಯಾರಿಗೆ ತೊಂದರೆ ಆಗುತ್ತದೆ ಎನ್ನುವುದನ್ನು ತಿಳಿಸಿ. ಹಾಗೆಯೇ ಅವರು ಯಾವ ರೀತಿಯಲ್ಲಿ ತೊಂದರೆಗೊಳಗಾಗುತ್ತಾರೆ ಎನ್ನುವುದನ್ನೂ ತಿಳಿಸಿ” ಎಂದು ಕೇಳಿದೆ.
ಸಿಎಎ ಇಂದಾಗಿ ತೊಂದರೆಗೊಳಗಾಗುವವರ ಪಟ್ಟಿಯನ್ನು ಮಾಡುವಂತೆ ಹೇಳಿರುವ ಬಿಜೆಪಿ, ನಿಮ್ಮ ಬಳಿ ಒಂದೇ ಒಂದು ಹೆಸರನ್ನೂ ಪಟ್ಟಿ ಮಾಡಲಾಗುವುದಿಲ್ಲ ಎಂದು ಸವಾಲನ್ನು ಹಾಕಿದೆ.
ಸಿಎಎ ಜಾರಿಗೆ ಬಂದಾಗಿನಿಂದಲೂ ದೇಶದಾದ್ಯಂತ ಸಿಎಎ ವಿರೋಧಿ ಹೋರಾಟಗಳು ನಡೆಯುತ್ತಿದೆ. ಕರ್ನಾಟಕದಲ್ಲಿಯೂ ಸಿಎಎ ವಿರೋಧಿ ಮತ್ತು ಪರ ಹೋರಾಟಗಳೆರೆಡೂ ಭಾರೀ ಪ್ರಮಾಣದಲ್ಲೇ ನಡೆದಿತ್ತು. (ಏಜೆನ್ಸೀಸ್)
Dear Opponents of the #CAA,
Please furnish the list of those Indian Citizens who will be affected by this Humanitarian Act.
Also, please specify how they will be affected.
We challenge that you will not be able to provide even a SINGLE NAME ! ! !#IndiaSupportsCAA
— BJP Karnataka (@BJP4Karnataka) February 19, 2020