More

    ವಿದ್ಯುತ್ ಬಿಲ್ ಮನ್ನಾ ಮಾಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹ

    ಮದ್ದೂರು: ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಠೀರ ಜ್ಯೋತಿ ಯೋಜನೆಯಡಿ ಬಿಲ್ ಕಟ್ಟಲಾರದೆ ಬಾಕಿ ಉಳಿಸಿಕೊಂಡಿರುವ ಬಡ ಫಲಾನುಭವಿಗಳಿಗೆ ವಿದ್ಯುತ್ ಬಿಲ್ 380 ಕೋಟಿ ರೂ. ಮನ್ನಾ ಮಾಡಿರುವ ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ.ಕಬ್ಬಾಳಯ್ಯ ಸ್ವಾಗತಿಸಿದ್ದಾರೆ.

    2013-18ರ ಅವಧಿಯಲ್ಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಭಾಗ್ಯಜ್ಯೋತಿ, ಕುಠೀರಜ್ಯೋತಿ ಯೋಜನೆಯಡಿ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿತ್ತು. ನಂತರ ಬಂದ ಸರ್ಕಾರಗಳು ವಿದ್ಯುತ್ ಬಿಲ್ ಅನ್ನು ಭರಿಸಲಾಗದ ನೈಜ ಬಡ ಕುಟುಂಬಗಳಿಗೆ ಅವರಿಂದ ಕಟ್ಟಲಾರದಷ್ಟು ವಿದ್ಯುತ್ ಬಿಲ್ ಹೊರೆಯಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಅತ್ಯಂತ ಕಡು ಬಡವರು ಪ್ರತಿ ಮನೆಗೆ 60 ರಿಂದ 70 ಸಾವಿರ ರೂ. ಬಿಲ್ ಬಂದಿದ್ದು, ಕೆಲವು ಮನೆಗಳ ಮೀಟರ್ ಅನ್ನು ಕಿತ್ತುಹಾಕಿ ಕತ್ತಲೆಯಲ್ಲಿ ಬದುಕು ಸವೆಸುತ್ತಿದ್ದರು. ಗೃಹಜ್ಯೋತಿ ಯೋಜನೆಯಡಿ ಚಾಲ್ತಿಯಲ್ಲಿರುವ ಬಿಲ್ ಅನ್ನು ಪಾವತಿ ಮಾಡಲು ಸಂಬಂಧಿಸಿದಂತೆ ವಿದ್ಯುತ್ ನಿಗಮಗಳು ಗ್ರಾಹಕರಿಗೆ ಒತ್ತಡ ನೀಡುತ್ತಿದ್ದು. ಈಗ ಬಿಲ್ ಕಟ್ಟಲಾರದೆ ಗೃಹಜ್ಯೋತಿ ಯೋಜನೆಯನ್ನು ಪಡೆಯಲಾರದೆ ಅತಂತ್ರ ಸ್ಥಿತಿಯಲ್ಲಿರುವುದನ್ನು ಮನಗಂಡು ವಿದ್ಯುತ್ ಬಿಲ್ ಕಟ್ಟಲಾರದೇ ಬಾಕಿ ಉಳಿಸಿಕೊಂಡಿಸಿರುವ ಬಡ ಫಲಾನುಭವಿಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವವರಿಗೆ ಸಂಪೂರ್ಣ ವಿದ್ಯುತ್ ಬಿಲ್ ಮನ್ನಾ ಮಾಡಿ ಅವರ ಬದುಕಿಗೆ ದಾರಿ ತೋರಿಸಿದ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

    ವಿದ್ಯುತ್ ಬಿಲ್ ಮನ್ನಾ ಮಾಡುವ ಸಂಬಂಧ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಇಂಧನ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಚಿವರಿಗೆ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡುವಂತೆ ಮನವಿ ಸಲ್ಲಿಸಲಾಗಿತ್ತು. ಇದನ್ನು ಮನಗಂಡ ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ನಡೆದ ಇಂಧನ ಇಲಾಖೆಯ ಸಭೆಯಲ್ಲಿ ವಿದ್ಯುತ್ ಬಾಕಿ ಬಿಲ್ ಮನ್ನಾ ಮಾಡುವ ಕ್ರಮ ಕೈಗೊಂಡಿರುವುದು ಸರ್ಕಾರಕ್ಕೆ ಇರುವ ಜನಪರ ಕಾಳಜಿಯನ್ನು ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಇದರ ಜತೆಗೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕಿರು ಸಾಲ ಯೋಜನೆಯಡಿ 5 ಸಾವಿರ ರೂ. ಸಾಲ ಪಡೆದಿದ್ದು, ಇದನ್ನು ಮನ್ನಾ ಮಾಡುವ ಮೂಲಕ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಅನುಕೂಲ ಕಲ್ಪಿಸಬೇಕು ಮತ್ತು ಮುಂದೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಹಕಾರ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts