ಬೆಂಗಳೂರು: ಗಣೇಶ ಹಬ್ಬ ಅಂದ್ರೆ ತಿಂಗಳಾನುಗಟ್ಟಲೇ ಸಡಗರ, ಸಂಭ್ರಮ ಕಳೆಗಟ್ಟಲಿದೆ. ಅಲ್ಲಿ ಇಡೀ ಏರಿಯಾ ಇಲ್ಲವೇ ಊರಿಗೆ ಊರೇ ಒಟ್ಟುಗೂಡಿ ವಿನಾಯಕನಿಗೆ ಪೂಜೆ ಮಾಡಲಿದೆ. ಆದರೀಗ ಈ ಉತ್ಸವಕ್ಕೆ ಕರೊನಾ ಛಾಯೆ ಆವರಿಸಿದ್ದು, ಅದ್ದೂರಿ ಆಚರಣೆಗೆ ಸರ್ಕಾರ ಬ್ರೇಕ್ ಹಾಕಿದೆ.
ಕರೊನಾ ಸೋಂಕು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರಿ ಯಾವುದೇ ಹಬ್ಬ ಆಚರಣೆ ಮಾಡುವುದು ಸರಿಯಲ್ಲ. ಅದ್ದೂರಿಯಾಗಿ ಗಣೇಶೋತ್ಸವ ಆಚರಿಸುವುದು ಬೇಡ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಇದನ್ನೂ ಓದಿರಿ ಪಿಯು ಪರೀಕ್ಷೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಾಸ್!
ಸಾರ್ವಜನಿಕರು ಗಣೇಶೋತ್ಸವವನ್ನು ಸರಳವಾಗಿ ಆಚರಿಸಬೇಕು. ಮನೆಗಳಲ್ಲಿಯೇ ಹಬ್ಬ ಆಚರಿಸಲು ಮಾಹಿತಿ ಹಾಗೂ ಸೂಕ್ತ ನಿರ್ದೇಶನ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. ಕರೊನಾ ಸಂಕಷ್ಟಕ್ಕೆ ಇಲುಕಿರುವ ರಾಜ್ಯವನ್ನು ವಿಘ್ನ ವಿನಾಶಕನೇ ಕಾಪಾಡಬೇಕಿದೆ.
ಇಂದು ರಾತ್ರಿಯಿಂದಲೇ ಬೆಂಗಳೂರು ಸ್ತಬ್ಧ: ಲಾಕ್ ಡೌನ್ ಅವಧಿಯಲ್ಲಿ ಏನಿರುತ್ತೆ, ಏನಿರಲ್ಲ?