More

    ಜಿಲ್ಲೆಯ ಉನ್ನತಿಯೇ ನನ್ನ ಗುರಿ

    ಶಿರಸಂಗಿ: ಸ್ಥಳೀಯ ಕಾಳಿಕಾ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಭಾನುವಾರ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಬಳಿಕ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 25 ವರ್ಷದ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿ, 3 ಬಾರಿ ಯಮನಮರಡಿ ಶಾಸಕನಾಗಿ, ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ.

    ಹೀಗಾಗಿ ಈ ಚುನಾವಣೆಯಲ್ಲಿ ಗೆದ್ದು ಜಿಲ್ಲೆಯ ಉನ್ನತಿ ಮಾಡಬೇಕೆನ್ನುವುದೇ ನನ್ನ ಗುರಿಯಾಗಿದೆ. ಈ ಕನಸು ಈಡೇರಿ ಸಲು ನಿಮ್ಮ ಅಮೂಲ್ಯ ಮತ ಕಾಂಗ್ರೆಸ್‌ಗೆ ನೀಡಬೇಕು ಎಂದು ಕೋರಿದರು.

    ಮಾಜಿ ಶಾಸಕ ಆರ್.ವಿ. ಪಾಟೀಲ, ಮುಖಂ ಡರಾದ ವಿಶ್ವಾಸ ವೈದ್ಯ, ಪಂಚನ ಗೌಡ ದ್ಯಾಮನಗೌಡರ, ಸೌರಭ ಚೋಪ್ರಾ, ಜಿ.ಜಿ.ಕಣವಿ, ಮೆಹಬೂಬ್ ರಾಮದುರ್ಗ, ಸ್ವಾತಿ ಮಾಳಗಿ, ಕೆ.ಬಿ.ಪಾಟೀಲ ಇತರರಿದ್ದರು.

    ಕಡಬಿ ವರದಿ: ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರನ್ನು ಬೆಂಬಲಿಸಿ ಮತ ನೀಡುವ ಮೂಲಕ ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ಹೇಳಿದ್ದಾರೆ. ಸ್ಥಳೀಯ ಗ್ರಾಮದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮಹಾದೇವ ಮಾಳೆಣ್ಣವರ, ದೊಡ್ಡಲಕ್ಷ್ಮಣ ಕುಂಟಿರಪ್ಪಗೋಳ, ಲೋಹಿತ ಮಾಳೆಣ್ಣವರ, ಅಂಬರೀಶ ಬೂಶ್ಗೋಳ, ದ್ಯಾಮಣ್ಣ ಮಾಳೆಣ್ಣವರ, ಸಂಜು ಹುಂಡೇಕರ, ತಿಪ್ಪಣ್ಣ ಉದಗಟ್ಟಿ, ಸದಾನಂದ ಬಡಿಗೇರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts