More

    ಕೆಸರಕೊಪ್ಪ ಗ್ರಾಮದ ಬಳಿ ವಾಲಿದ ಬಸ್

    ರಬಕವಿ-ಬನಹಟ್ಟಿ : ತಾಲೂಕಿನ ಕೆಸರಕೊಪ್ಪ ಗ್ರಾಮದ ಬಳಿ ಮಂಗಳವಾರ ಸಂಜೆ ಸೇತುವೆ ಪಕ್ಕದ ಹದಗೆಟ್ಟ ರಸ್ತೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ನೀರು ತುಂಬಿದ ತಗ್ಗು ಗುಂಡಿಯಲ್ಲಿ ವಾಲಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಸಂಭವನೀಯ ಅಪಾಯ ತಪ್ಪಿದೆ.

    ಚಿತ್ತಾಪುರ-ಬನಹಟ್ಟಿ-ಮಹಾಲಿಂಗಪುರ ಮಾರ್ಗವಾಗಿ ಬೆಳಗಾವಿ ಜಿಲ್ಲೆ ಮುಗಳಖೋಡಕ್ಕೆ ಬಸ್ ತೆರಳುತ್ತಿದ್ದಾಗ ಕೆಸರಕೊಪ್ಪ ಗ್ರಾಮದ ಬಳಿ ಬ್ರಿಡ್ಜ್ ಹತ್ತಿರ ಬಸ್ ವಾಲುತ್ತಿದ್ದಂತೆ ಪ್ರಯಾಣಿಕರು ಭಯದಿಂದ ಅವಸರವಾಗಿ ಇಳಿದಿದ್ದಾರೆ.

    ಇದನ್ನೂ ಓದಿ: ರಸ್ತೆ ಸುಧಾರಣೆಗೆ ಆಗ್ರಹಿಸಿ ಉರುಳು ಸೇವೆ

    ಬಸ್ ವಾಲುತ್ತಿದೆ ಅನ್ನಿಸಿದ ತಕ್ಷಣ ಸಮಯ ಪ್ರಜ್ಞೆ ಮೆರೆದ ಚಾಲಕ ಬಸ್‌ನ್ನು ತಕ್ಷಣ ನಿಲ್ಲಿಸಿದ್ದಾರೆ. ಹೀಗಾಗಿ ಬಸ್ ಪೂರ್ಣ ಉರುಳುವುದು ತಪ್ಪಿದೆ. ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೆ ಪಾರಾಗಿದ್ದಾರೆ. ಬಸ್‌ನಲ್ಲಿ 25 ರಿಂದ 30 ಪ್ರಯಾಣಿಕರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts