More

    ಶಿವಮೊಗ್ಗ | ಅನಾಮಿಕ ಕರೆ ಆಧರಿಸಿ 10 ಕೋಟಿ ರೂ. ಬೆನ್ನತ್ತಿ ಹೋದ ಪೊಲೀಸರಿಗೆ ಸಿಕ್ಕಿದ್ದು ಬಟ್ಟೆ ಬಂಡಲ್!

    ಶಿವಮೊಗ್ಗ: ಮುಂಬೈನಿಂದ ಬಂದ ಖಾಸಗಿ ಬಸ್‌ನಲ್ಲಿ ಅಕ್ರಮವಾಗಿ ಬರೋಬ್ಬರಿ 10 ಕೋಟಿ ರೂ. ಸಾಗಿಸಲಾಗುತ್ತಿದೆ ಎಂಬ ಠಾಣೆಗೆ ಬಂದ ಅನಾಮಿಕ ಕರೆಯನ್ನಾಧರಿಸಿ ದಾಳಿ ನಡೆಸಿದ್ದ ಪೊಲೀಸರಿಗೆ ಸಿಕ್ಕಿದ್ದು 8 ಲಕ್ಷ ರೂ. ಮೌಲ್ಯದ ಬಟ್ಟೆ ಬಂಡಲ್. ಇದು ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ.

    ಶುಕ್ರವಾರ ರಾತ್ರಿ ಮುಂಬೈನಿಂದ ಹೊರಟ ಈಸ್ಟ್ ವೆಸ್ಟ್ ಬಸ್‌ನಲ್ಲಿ ಬಟ್ಟೆ ಬಂಡಲ್‌ಗಳಲ್ಲಿ ಅಕ್ರಮವಾಗಿ ಕೋಟಿ ಕೋಟಿ ರೂ. ಹಣ ಸಾಗಿಸಲಾಗುತ್ತಿದೆ ಎಂದು ದೂರು ಬಂದಿತ್ತು. ಆ ದೂರಿನನ್ವಯ ಶನಿವಾರ ಬೆಳಗ್ಗೆ ಬಿ.ಎಚ್.ರಸ್ತೆಯ ಸೋಮಯ್ಯ ಲೇಔಟ್‌ಗೆ ಸಾಗುವ ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರಿಗೆ ಲಕ್ಷಾಂತರ ರೂ. ಮೌಲ್ಯದ ಬಟ್ಟೆ ಬಂಡಲ್‌ಗಳು ಸಿಕ್ಕಿದೆ.

    ಇದನ್ನೂ ಓದಿ: ‘ಸಿಎಂ ಯೋಗಿ ಜೀ… ನನ್ನನ್ನು ಕ್ಷಮಿಸಿ’ ಎನ್ನುತ್ತಲೇ ಎನ್​ಕೌಂಟರ್ ಭಯದಿಂದ ಪೊಲೀಸರಿಗೆ ಶರಣಾದ ಖದೀಮ!

    ದೊಡ್ಡಪೇಟೆ ಠಾಣೆ ಪಿಎಸ್‌ಐ ವಸಂತ್ ನೇತೃತ್ವದಲ್ಲಿ ಐವರು ಪೇದೆಗಳು ಬಸ್‌ನ್ನು ತಡೆದು ತಪಾಸಣೆಗೆ ಒಳಪಡಿಸಿದಾಗ ದಾಖಲೆ ಇಲ್ಲದ ಶಿವಮೊಗ್ಗ, ಭದ್ರಾವತಿ ಸೇರಿ ಜಿಲ್ಲೆಯ ಹಲವು ಬಟ್ಟೆ ಅಂಗಡಿಗಳ 40 ಬಂಡಲ್ ಬಟ್ಟೆ ಪತ್ತೆಯಾಗಿವೆ. ಬಟ್ಟೆ ಬಂಡಲ್​ನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ವೀರಭದ್ರೇಶ್ವರ ಟಾಕೀಸ್ ಬಳಿಯಿರುವ ಈಸ್ಟ್ ವೆಸ್ಟ್ ಕಚೇರಿ ಬಳಿ ಪ್ರಯಾಣಿಕರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

    ವಿವಿಧ ಬಟ್ಟೆ ಅಂಗಡಿಗಳಿಗೆ ಸೇರಿದ ಬಟ್ಟೆಗಳ ಮೌಲ್ಯ 8 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಎಲ್ಲ ಬಟ್ಟೆ ಸರಕುಗಳನ್ನು ವಾಣಿಜ್ಯ ತೆರಿಗೆ ಸಿಟಿಒ ಅಧಿಕಾರಿ ನಾಗರಾಜ್ ಅವರಿಗೆ ಹಸ್ತಾಂತರಿಸಲಾಗಿದೆ.

    ಇದನ್ನೂ ಓದಿ: ರೈಲ್ವೇ ನಿಲ್ದಾಣದಲ್ಲಿ ಶವ ಪತ್ತೆ ಪ್ರಕರಣ | ಮೂವರ ಬಂಧನ; ಪೊಲೀಸರಿಗೆ ಹಂತಕರ ಸುಳಿವು ನೀಡಿದ್ದು ಡ್ರಮ್ ಮೇಲಿದ್ದ ಸ್ಟಿಕ್ಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts