ಹುಬ್ಬಳ್ಳಿ: ಇಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ದಿ ಆಝಾದ್ ಅರ್ಬನ್ ಕೋ ಆಪ್ ಬ್ಯಾಂಕ್ನ ಆಡಳಿತ ಮಂಡಳಿ ನಿರ್ದೇಶಕರು ಗುರುವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅತ್ತಾರ ಹಾಜಿ ಅಬ್ದುಲ್ ಖಾದರ್ ಹಾಜಿ ಅಲ್ಲಾಭಕ್ಷ, ಮುಜಾವರ ಅಬ್ದುಲ್ ಖಾದರ್ ಮೆಹಬೂಬ್ಸಾಬ, ಶಿರೂರ ಮೊಹಮ್ಮದ್ ರಫಿಕ್ ಮೊಹದ್ದೀನಸಾಬ, ಸುಂಡಕೆ ಮುಸ್ತಾಕ ಅಹ್ಮದ ಇಬ್ರಾಹಿಂಸಾಬ್, ಹಿಂಡಸಗೇರಿ ಅಬ್ದುಲ್ ಹಕೀಂ ಮೊಹಮ್ಮದ್ ಗೌಸ್, ಹಿಂಡಸಗೇರಿ ನಾಜಿಮುದ್ದೀನ್ ಮೊಹಮ್ಮದ್ಗೌಸ್, ಹೆಬ್ಬಳ್ಳಿ ಅಬ್ದುಲ್ ಖಾದರ್ ದಾದಾಭಾಯಿ (ಸಾಮಾನ್ಯ), ಕಮ್ಮಾರ ರಾಮಪ್ಪ ಬಸವಣ್ಣೆಪ್ಪ (ಎಸ್ಸಿ), ತಲವಾರ ಉಮಾ ರಾಮಚಂದ್ರ(ಎಸ್ಟಿ), ಪಲ್ಲಾಂ ಸುಹೇಲ ಆರಾ ವಾಜೀದ್ ಹುಸೇನ್, ಮುಲ್ಲಾ ಹಸನಬಿ ಮೊಹಮ್ಮದ್ ಅಲಿ(ಮಹಿಳಾ ಮೀಸಲು), ಚುಲಬುಲ ನಾಸೀರುದ್ದೀನ್ ಮೊಹಮ್ಮದ್ ತಾಹೀರ, ಜವಳಿ ಅಬ್ದುಲ್ ಮಜೀದ್ ಅಬ್ದುಲ್ ಖಾದರ್(ಹಿಂದುಳಿದ ಎ ಮತ್ತು ಬಿ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಎಸ್.ಎ. ಪಾಂಡುರಂಗಿ ತಿಳಿಸಿದ್ದಾರೆ.