More

    ಮೈಸೂರಿನಲ್ಲಿ ಚಿತ್ರೀಕರಣದ ವೇಳೆ ತೆಲುಗು ನಟ ಗೋಪಿಚಂದ್​ಗೆ ಗಾಯ

    ಹೈದರಾಬಾದ್​: ಚಿತ್ರೀಕರಣದ ವೇಳೆ ನಟ ಗೋಪಿಚಂದ್​ ಗಾಯಗೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.

    ಇನ್ನೂ ಹೆಸರಿಡದ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಒಂದು ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ಗೋಪಿಚಂದ್​ ಅವರು ಕಾಲುಜಾರಿ ಗಾಯಗೊಂಡಿದ್ದಾರೆ ಎಂದು ನಿರ್ದೇಶಕ ಶ್ರಿವಾಸ್​ ತಿಳಿಸಿದ್ದಾರೆ.

    ಸದ್ಯ ಅವರಿಗೆ ಹೆಚ್ಚೇನು ಗಾಯವಾಗಿಲ್ಲ, ಅವರ ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ. ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.

    ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ವೇಳೆ ಈ ಘಟನೆಯಾಗಿದೆ. ಸದ್ಯ ನಟ ಗೋಪಿಚಂದ್​ ಅವರಿಗೆ ಏನೂ ಸಮಸ್ಯೆಯಿಲ್ಲ, ಕಾಲಿಗೆ ಸ್ವಲ್ಪ ಪೆಟ್ಟಾಗಿದೆ ಎಂದು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.

    2021ರಲ್ಲೇ ಈ ಚಿತ್ರ ಘೊಷಣೆಯಾಗಿತ್ತು. ಕರೊನಾ ಕಾರನದಿಂದಾಗಿ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಏಪ್ರಿಲ್​ 29ರಿಂದ ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂದು ನಿರ್ದೇಶಕ ಶ್ರೀವಾಸ್​ ತಿಳಿಸಿದ್ದಾರೆ. ಗೋಪಿಚಂದ್​ ಜತೆಗೆ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.

    ಮಧ್ಯರಾತ್ರಿ ಸ್ಪೈಸ್​ಜೆಟ್​ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಏನಾಯ್ತು? ವಿಮಾನಯಾನ ಸಚಿವಾಲಯದಿಂದ ತನಿಖೆಗೆ ಆದೇಶ

    ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಭಾರಿ ಮಳೆ ಬಿರುಗಾಳಿಗೆ ಕೊಚ್ಚಿಹೋದ ಮಾವಿನ ಫಸಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts