ಹೈದರಾಬಾದ್: ಚಿತ್ರೀಕರಣದ ವೇಳೆ ನಟ ಗೋಪಿಚಂದ್ ಗಾಯಗೊಂಡಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
ಇನ್ನೂ ಹೆಸರಿಡದ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಒಂದು ದೃಶ್ಯ ಚಿತ್ರೀಕರಣದ ಸಂದರ್ಭದಲ್ಲಿ ಗೋಪಿಚಂದ್ ಅವರು ಕಾಲುಜಾರಿ ಗಾಯಗೊಂಡಿದ್ದಾರೆ ಎಂದು ನಿರ್ದೇಶಕ ಶ್ರಿವಾಸ್ ತಿಳಿಸಿದ್ದಾರೆ.
ಸದ್ಯ ಅವರಿಗೆ ಹೆಚ್ಚೇನು ಗಾಯವಾಗಿಲ್ಲ, ಅವರ ಅಭಿಮಾನಿಗಳು ಭಯಪಡುವ ಅಗತ್ಯವಿಲ್ಲ. ಸ್ವಲ್ಪ ದಿನ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯುತ್ತಿರುವ ವೇಳೆ ಈ ಘಟನೆಯಾಗಿದೆ. ಸದ್ಯ ನಟ ಗೋಪಿಚಂದ್ ಅವರಿಗೆ ಏನೂ ಸಮಸ್ಯೆಯಿಲ್ಲ, ಕಾಲಿಗೆ ಸ್ವಲ್ಪ ಪೆಟ್ಟಾಗಿದೆ ಎಂದು ಅವರ ಅಭಿಮಾನಿಗಳಿಗೆ ಹೇಳಿದ್ದಾರೆ.
2021ರಲ್ಲೇ ಈ ಚಿತ್ರ ಘೊಷಣೆಯಾಗಿತ್ತು. ಕರೊನಾ ಕಾರನದಿಂದಾಗಿ ಚಿತ್ರೀಕರಣ ಪ್ರಾರಂಭವಾಗಿರಲಿಲ್ಲ. ಏಪ್ರಿಲ್ 29ರಿಂದ ಚಿತ್ರೀಕರಣ ಪ್ರಾರಂಭಿಸಲಾಗಿದೆ ಎಂದು ನಿರ್ದೇಶಕ ಶ್ರೀವಾಸ್ ತಿಳಿಸಿದ್ದಾರೆ. ಗೋಪಿಚಂದ್ ಜತೆಗೆ ನಿರ್ದೇಶಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ.
ಮಧ್ಯರಾತ್ರಿ ಸ್ಪೈಸ್ಜೆಟ್ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಏನಾಯ್ತು? ವಿಮಾನಯಾನ ಸಚಿವಾಲಯದಿಂದ ತನಿಖೆಗೆ ಆದೇಶ
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ, ಭಾರಿ ಮಳೆ ಬಿರುಗಾಳಿಗೆ ಕೊಚ್ಚಿಹೋದ ಮಾವಿನ ಫಸಲು