More

    ಮನೋ ರೋಗಿಗಳು, ಮಾನಸಿಕ ಅಸ್ವಸ್ಥರನ್ನು ಸರಪಳಿಯಿಂದ ಅಮಾನವೀಯವಾಗಿ ಕಟ್ಟಿ ಹಾಕಿದ್ದ ವೃದ್ಧಾಶ್ರಮದ ವಿರುದ್ಧ ದೂರು ದಾಖಲು

    ತೆಲಂಗಾಣ: ಮನೋ ರೋಗಿಗಳು ಮತ್ತು ಮಾನಸಿಕ ಅಸ್ವಸ್ಥರನ್ನು ಸರಪಳಿಯಿಂದ ಕಟ್ಟಿ ಹಾಕಲಾಗಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ವೃದ್ಧಾಶ್ರಮದ ಆಡಳಿತ ಮಂಡಳಿ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ವೃದ್ಧಾಶ್ರಮದಲ್ಲಿ ಕೆಲವರನ್ನು ಸರಪಳಿಯಿಂದ ಕಟ್ಟಿ ಹಾಕಲಾಗಿತ್ತು. ಅವರನ್ನು ಅಕ್ರಮವಾಗಿ ಬಂಧಿಸಲಾಗಿದ್ದು, ಅಮಾನವೀಯವಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ದೂರು ಬಂದಿತ್ತು.

    ಮನೆಗೆ ತರಳಿ ತಪಾಸಣೆ ನಡೆಸಲಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​) 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts