ಮೈಸೂರು: ‘ರೇರಾ’ ಕಾಯ್ದೆಗೆ ಸಂಬಂಧಿಸಿದಂತೆ ಮಾ.20 ರಂದು ಸಂಜೆ 6.30ಕ್ಕೆ ನಗರದ ಹೆಬ್ಬಾಳದ ನಾರ್ಥ್ ಅವೆನ್ಯೂ ಮೈಸೂರು ಯೂನಿಯನ್ ಸಭಾಂಗಣದಲ್ಲಿ ವಿಚಾರಸಂಕಿರಣ ಆಯೋಜಿಸಲಾಗಿದೆ ಎಂದು ನರೆಡ್ಕೋ ಅಧ್ಯಕ್ಷ ರವಿಕುಮಾರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನರೆಡ್ಕೋ ಕಾನೂನು ಸಮಿತಿ ಅಧ್ಯಕ್ಷ ಧೀರೇಂದ್ರ ಕುಮಾರ್ ಮೆಹ್ತಾ, ಪ್ರಮುಖರಾದ ಟಿ.ಜಿ.ಆದೇಶನ್ಗೌಡ, ಪಿ.ವಿನಯ್ಕುಮಾರ್, ರಾಘವೇಂದ್ರ ಪ್ರಸಾದ್, ಎ.ಪಿ.ನಾಗೇಶ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪದಾಧಿಕಾಗಳಾದ ಡಾ.ಧೀರೇಂದ್ರಕುಮಾರ್ ಮೆಹ್ತಾ, ಎ.ಪಿ.ನಾಗೇಶ್, ಎಸ್.ಫಣಿರಾಜ್ ಇದ್ದರು.