More

    ಬೆಂಗಳೂರಲ್ಲಿ ಸ್ವಪ್ನ-ಸಂದೀಪ್​ ಬಂಧನ; ಕೇರಳದಲ್ಲಿ ರಾಜಕೀಯ ತಲ್ಲಣ

    ಕೋಳಿಕ್ಕೋಡ್​: ರಾಜತಾಂತ್ರಿಕ ಮಾರ್ಗದಲ್ಲಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಕ್ಕೆ ಒಳಗಾಗಿರುವ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ಕೋವಿಡ್​ ನಿರ್ಬಂಧದ ಹೊರತಾಗಿಯೂ ಕೇರಳದಿಂದ ಕರ್ನಾಟಕಕ್ಕೆ ತೆರಳಿದ ಸಂಗತಿ ಕೇರಳದಲ್ಲಿ ರಾಜಕೀಯ ತಲ್ಲಣಕ್ಕೆ ಕಾರಣವಾಗಿದೆ.

    ಕೋವಿಡ್​-19 ನಿರ್ಬಂಧದ ಹಿನ್ನೆಲೆಯಲ್ಲಿ ಕೇರಳದಿಂದ ಯಾರೊಬ್ಬರೂ ಹೊರಹೋಗುವಂತಿಲ್ಲ. ಅಂತೆಯೇ ಯಾರೊಬ್ಬರೂ ಒಳಬರುವಂತಿಲ್ಲ. ಇದರಿಂದಾಗಿ ಸಾಮಾನ್ಯ ಜನರ ಓಡಾಟಕ್ಕೆ ಭಾರಿ ತೊಂದರೆ ಉಂಟಾಗಿದೆ. ಆದರೆ, ಪ್ರಭಾವಿಗಳು ಮಾತ್ರ ಯಾವುದೇ ನಿರ್ಬಂಧದ ತಡೆ ಇಲ್ಲದೆ ಮುಕ್ತವಾಗಿ ಸಂಚರಿಸುತ್ತಿದ್ದಾರೆ. ಪ್ರಭಾವಿಗಳ ನೆರವಿಲ್ಲದೆ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ಕೇರಳ ಗಡಿಭಾಗದ ಚೆಕ್​ಪೋಸ್ಟ್​ಗಳನ್ನು ಅಷ್ಟು ಸುಲಭವಾಗಿ ದಾಟಿ ಕರ್ನಾಟಕಕ್ಕೆ ತೆರಳಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇರಳದಲ್ಲಿ ದಟ್ಟವಾಗಿವೆ.

    ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಬಡತನದ ಬೇಗೆ ಕಟ್ಟುಕಥೆ: ಅವನ ಕುಟುಂಬ ಹಿನ್ನೆಲೆ ಏನು ಗೊತ್ತಾ?

    ಇದಕ್ಕೂ ಮುನ್ನ ಪ್ರತಿಪಕ್ಷ ನಾಯಕ ರಮೇಶ್​ ಚೆನ್ನಿತಾಲಾ ಅವರು ಕೇರಳ ಪೊಲೀಸರ ನೆರವಿನಿಂದಲೇ ಸ್ವಪ್ನಾ ಸುರೇಶ್​ ಮತ್ತು ಸಂದೀಪ್​ ನಾಯರ್​ ರಾಜ್ಯವನ್ನು ಬಿಟ್ಟು ಹೋಗಿದ್ದಾಗಿ ಆರೋಪಿಸಿದ್ದರು. ಈ ಮಾಹಿತಿಯನ್ನು ಆಧಾರ ಸಮೇತವಾಗಿ ಬಹಿರಂಗಪಡಿಸುವುದಾಗಿ ಹೇಳಿದ್ದರು.

    ತಿರುವನಂತಪುರದಲ್ಲಿ ಸರ್ಕಾರ ಟ್ರಿಪಲ್​ ಲಾಕ್​ಡೌನ್​ ಘೋಷಿಸಿದ ಸಂದರ್ಭದಲ್ಲಿ ಸ್ವಪ್ನ ಮತ್ತು ಸಂದೀಪ್​ ಅಲ್ಲಿಂದ ಹೊರಟಿದ್ದರು. ನೇರವಾಗಿ ಕೊಚ್ಚಿಗೆ ಹೋದ ಅವರು ಅಲ್ಲಿಂದ ಬೆಂಗಳೂರಿಗೆ ತೆರಳಿದ್ದರು. ಚಿನ್ನದ ಕಳ್ಳಸಾಗಣಿಕೆಯ ಹಗರಣ ಬಹಿರಂಗವಾಗುವ ಸಂದರ್ಭದಲ್ಲಿ ಅವರು ತಮ್ಮ ಕುಟುಂಬದವರೊಂದಿಗೆ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

    ಅಮಿತಾಭ್‌ ನಂತರ ಬಂದಿದೆ ಅನುಪಮ್‌ ಖೇರ್‌ ಕುಟುಂಬದ ಕರೊನಾ ಸುದ್ದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts