More

    ‘ಎಷ್ಟೇ ಜನ್ಮವಾದ್ರೂ ನನ್ನ ಪತ್ನಿ ಸ್ಥಾನ ನಟಿ ಕಲ್ಯಾಣಿಯದ್ದೆ’ “ಹೆಬ್ಬುಲಿ” ನಟಿ ಕುರಿತು ನಟ ಸೂರ್ಯ ಕಿರಣ್ ಕೊನೆಯ ಮಾತು…

    ಹೈದ್ರಾಬಾದ್​:  ಖ್ಯಾತ ನಿರ್ದೇಶಕ ಹಾಗೂ ನಟ ಸೂರ್ಯ ಕಿರಣ್ ನಿಧನರಾಗಿದ್ದಾರೆ. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಮಾರ್ಚ್ 11) ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ. 

    ಸೂರ್ಯ ಕಿರಣ್ ಅವರು ‘ಸತ್ಯಂ’ ಚಿತ್ರದ ಮೂಲಕ ನಿರ್ದೇಶಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು (ಮಾರ್ಚ್ 11) ಚೆನ್ನೈನಲ್ಲಿ ಇಹಲೋಕ ತ್ಯಜಿಸಿದ್ದಾರೆ.  ಮಂಗಳವಾರ ಚೆನ್ನೈನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೂರ್ಯ ಕಿರಣ್ ನಿಧನಕ್ಕೆ ಟಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.  ಈ ವೇಳೆ ಸೂರ್ಯ ಕಿರಣ್​ ಅವರು ಈ ಹಿಂದೆ ಪತ್ನಿ ನಟಿ ಕಲ್ಯಾಣಿಯ ಕುರಿತಾಗಿ ಆಡಿರುವ ಮಾತುಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ಹಿರಿಯ ನಟಿ ಕಲ್ಯಾಣಿ ಅವರನ್ನು ಮದುವೆಯಾಗಿದ್ದ ಸೂರ್ಯ ಕಿರಣ್ ವೈಯಕ್ತಿಕ ಕಾರಣಗಳಿಂದ ಬೇರ್ಪಟ್ಟು ವಿಚ್ಛೇದನ ಪಡೆದಿದ್ದರು. ಒಂದೆಡೆ ಇಂಡಸ್ಟ್ರಿಯಿಂದ ದೂರ.. ಒಂಟಿ ಜೀವನ.. ಖಿನ್ನತೆಗೆ ಒಳಗಾಗಿದ್ದರು ಸೂರ್ಯ ಕಿರಣ್.

    ಚಿತ್ರಗಳ ಸತತ ಫ್ಲಾಪ್ ಗಳಿಂದ.. ವೈವಾಹಿಕ ಬಂಧದ ಸಮಸ್ಯೆಗಳಿಂದಾಗಿ.. ಸೂರ್ಯ ಕಿರಣ್ ಮಾನಸಿಕ ಖಿನ್ನತೆಗೆ ಒಳಗಾಗಿ ನಾಲ್ಕು ವರ್ಷಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ದರು. ಸುಮಾರು 7 ವರ್ಷಗಳಿಂದ ಕಾಣೆಯಾಗಿದ್ದ ಸೂರ್ಯ ಕಿರಣ್ 2020 ರಲ್ಲಿ ಬಿಗ್ ಬಾಸ್ ಸೀಸನ್ 4 ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಮೊದಲ ವಾರದಲ್ಲಿ ಹೊರಬಂದರು. ಆದರೆ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ನಂತರ.. ಸೂರ್ಯ ಕಿರಣ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುತ್ತಾ ತುಂಬಾ ಭಾವುಕರಾಗಿದ್ದರು.

    “ತಾಯಿಯ ನಂತರ ತಾನೆ ತಾಯಿ ಎಂದು ಕಲ್ಯಾಣಿ ಹೇಳಿದ್ದರು. ಪ್ರತಿನಿತ್ಯ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ . ಕಲ್ಯಾಣಿಯನ್ನು ಇಂದೂ ಕೂಡಾ ಪ್ರೀತಿಸುತ್ತೇನೆ. ತನ್ನ ಬದುಕಿನ ಈ ಜಾಗವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ . ಅವಳಿಗೆ ನನ್ನ ಅಗತ್ಯವಿಲ್ಲದಿರಬಹುದು.. ಆದರೆ ನನಗೆ ಅವಳು ಶಾಶ್ವತವಾಗಿ ಬೇಕು ಎಂದು ಸೂರ್ಯ ಕಿರಣ್ ಭಾವುಕರಾಗಿದ್ದರು.

    ವಿಚ್ಛೇದನವು ಇಬ್ಬರನ್ನೂ ಬೇರ್ಪಡಿಸಿದರೂ ಹೃದಯವನ್ನು ಬೇರ್ಪಡಿಸಲಿಲ್ಲ. ಈ ಜನ್ಮದಲ್ಲಷ್ಟೇ ಅಲ್ಲ, ಇನ್ನು ಹಲವು ಜನ್ಮಗಳಲ್ಲೂ ನನ್ನ ಹೆಂಡತಿಯ ಸ್ಥಾನ ಕಲ್ಯಾಣಿಯದ್ದೆ ಆಗಿರುತ್ತದೆ. ನನ್ನ ಫೋನ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಕಲ್ಯಾಣಿ ಅವರ ಫೋಟೋ ಇದೆ ಎಂದು ಸೂರ್ಯ ಕಿರಣ್ ಮಾಧ್ಯಮದವರಿಗೆ ಹೇಳಿದ ಕೊನೆಯ ಮಾತುಗಳು ಇಂದು ಅವರು ನಿಧನರಾದ ಬೆನ್ನಲ್ಲೆ ವೈರಲ್​ ಆಗುತ್ತಿವೆ.

    ಶರತ್ ಬಾಬು ಜತೆ ಮಗು ಆಗಬೇಕು ಅಂತ ಆಸೆ ಇತ್ತು..ಆದ್ರೆ ಅದು ಆಗಲಿಲ್ಲ ಎಂದ್ರು ಖ್ಯಾತ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts