More

    ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಿ

    ತರೀಕೆರೆ: ತಾಲೂಕಿನ ಲಕ್ಕೇನಹಳ್ಳಿ ಭಾಗದ ಐಪಿ ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ರೈತರು ಮೆಸ್ಕಾಂ ಶಾಖಾಧಿಕಾರಿ ಜೆ.ಅಜೇಯ್‌ಗೆ ಶನಿವಾರ ಮನವಿ ಸಲ್ಲಿಸಿದರು.
    ಜಿಪಂ ಮಾಜಿ ಸದಸ್ಯ ಕೆ.ಪಿ.ಕುಮಾರ್ ಮಾತನಾಡಿ, ಸರ್ಕಾರ ರೈತರ ಪಂಪ್ ಸೆಟ್‌ಗಳಿಗೆ 7 ಗಂಟೆ ತ್ರೀೇಸ್ ವಿದ್ಯುತ್ ಪೂರೈಸಬೇಕೆಂಬ ಆದೇಶ ಹೊರಡಿಸಿದ್ದರೂ ಲಕ್ಕೇನಹಳ್ಳಿ ಭಾಗದ ರೈತರ ಜಮೀನುಗಳಲ್ಲಿರುವ ಐಪಿ ಸೆಟ್‌ಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದೆ. ಬೇಸಿಗೆ ಆರಂಭವಾಗಿರುವುದರಿಂದ ಬೆಳೆ ಉಳಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ. ರೈತರ ಹಿತದೃಷ್ಟಿ ಯಿಂದ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿದರು.
    ಗ್ರಾಮಸ್ಥರಾದ ಶ್ರೀನಿವಾಸ್, ಮಂಜುನಾಥ್, ಆನಂದ, ಗೋಪಾಲ, ನಟರಾಜ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts