More

    ನೀವು ಮನಸ್ಸು ಮಾಡಿದರೆ ‘ಬಾಯ್ಕಾಟ್​ ಬಾಲಿವುಡ್​’ ತಡೆಯಬಹುದು … ಯೋಗಿ ಆದಿತ್ಯನಾಥ್​ಗೆ ಸುನೀಲ್​ ಶೆಟ್ಟಿ ಮನವಿ

    ಮುಂಬೈ: ಅದ್ಯಾಕೋ ಗೊತ್ತಿಲ್ಲ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಮತ್ತು ಅಲ್ಲಿನ ಮಂದಿಯ ಬಗ್ಗೆ ಜನರಲ್ಲಿ ಒಂದು ರೀತಿಯ ಆಕ್ರೋಶ ಹೆಚ್ಚಾಗಿದ್ದು, ಪದೇಪದೇ ‘ಬಾಯ್ಕಾಟ್​ ಬಾಲಿವುಡ್​’ ಅಭಿಯಾನಗಳು ಕೇಳಿ ಬರುತ್ತಿವೆ. ಬಾಲಿವುಡ್​ ಚಿತ್ರಗಳನ್ನು ಬಾಯ್ಕಾಟ್​ ಮಾಡುವ ಬೆದರಿಕೆಗಳು ಹೆಚ್ಚಾಗಿವೆ. ಇದನ್ನು ತಡೆಯಲು ಸಹಾಯ ಮಾಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಬಾಲಿವುಡ್​ ನಟ ಸುನೀಲ್​ ಶೆಟ್ಟಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: ಫ್ಯಾಮಿಲಿ ಜೊತೆ ದುಬೈಗೆ ಹಾರಿದ ಯಶ್ … ಬುರ್ಜ್​ ಖಲೀಫಾ ಮೇಲೆ ಹೊಸ ಚಿತ್ರದ ಘೋಷಣೆ?

    ಯೋಗಿ ಆದಿತ್ಯನಾಥ್​ ಮುಂಬೈಗೆ ಎರಡು ದಿನಗಳ ಕಾಲ ಭೇಟಿ ನೀಡಿ, ಅಲ್ಲಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಬಾಲಿವುಡ್​ ಮಂದಿಯನ್ನೂ ಅವರು ಭೇಟಿ ಮಾಡಿದ್ದಾರೆ. ಈ ನಿಯೋಗದಲ್ಲಿ ಸುನೀಲ್​ ಶೆಟ್ಟಿ, ಜಾಕಿ ಶ್ರಾಫ್​, ಬೋನಿ ಕಪೂರ್​ ಸೇರಿದಂತೆ ಹಲವರು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಸುನೀಲ್​ ಶೆಟ್ಟಿ ಮನವಿ ಮಾಡಿದ್ದಾರೆ.

    ಈ ಕುರಿತು ಮಾತನಾಡಿರುವ ಅವರು, ‘ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ ಬಗ್ಗೆ ದ್ವೇಷ ಹೆಚ್ಚಾಗುತ್ತಿದೆ. ಬಾಯ್ಕಾಟ್​ ಮಾಡುವ ಬೆದರಿಕೆಗಳು ಬರುತ್ತಿವೆ. ನೀವು ಮನಸ್ಸು ಮಾಡಿದರೆ ಇವೆಲ್ಲವನ್ನೂ ನಿಲ್ಲಿಸಬಹುದು. ಇಷ್ಟಕ್ಕೂ ನಾವು ಮಾಡಿರುವ ತಪ್ಪಾದರೂ ಏನು. ನಾವು ಸಹ ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ನಮ್ಮಲ್ಲೂ ಒಳ್ಳೆಯ ಚಿತ್ರಗಳು ಬರುತ್ತಿವೆ. ಯಾರೋ ಒಬ್ಬರು ತಪ್ಪು ಮಾಡಿದರೆ, ಇಡೀ ಉದ್ಯಮವನ್ನು ಧೂಷಿಸುವುದು ತಪ್ಪಾಗುತ್ತದೆ. ಈ ಬಾಯ್ಕಾಟ್​ ಅಭಿಯಾನದಿಂದ ಬಾಲಿವುಡ್​ಗೆ ಕೆಟ್ಟ ಹೆಸರು ಬಂದಿದೆ. ಈ ಜಾಗ ಸರಿ ಇಲ್ಲ ಎಂದು ಜನ ತೀರ್ಮಾನಿಸುತ್ತಿದ್ದಾರೆ. ಇದರ ವಿರುದ್ಧ ನಾವು ಹೋರಾಡಬೇಕಿದೆ. ಈ ಟ್ರೆಂಡ್​ ಹೇಗೆ ನಿಲ್ಲಿಸಬೇಕು ಎಂದು ಎಲ್ಲರೂ ಯೋಚಿಸಬೇಕಿದೆ’ ಎಂದಿದ್ದಾರೆ.

    ಇದನ್ನೂ ಓದಿ: ‘ಆರಾಮ್ ಅರವಿಂದ್ ಸ್ವಾಮಿ’ಗೆ ಜತೆಯಾದ ಮಿಲನಾ ನಾಗರಾಜ್ …

    ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, ‘ನಾನು ಇವತ್ತು ಹೆಸರು ಮಾಡಿದ್ದರೆ, ಅದಕ್ಕೆ ಕಾರಣ ಉತ್ತರ ಪ್ರದೇಶ ಮತ್ತು ಅಲ್ಲಿಯ ಜನ ನನ್ನ ಆಕ್ಷನ್ ಚಿತ್ರಗಳಿಗೆ ತೋರಿಸಿದ ಪ್ರೀತಿ. ನೀವು ಮನಸ್ಸು ಮಾಡಿದರೆ, ಖಂಡಿತಾ ಈ ಅಭಿಯಾನವನ್ನು ನಿಲ್ಲಿಸಬಹುದು. ನಮ್ಮ ಮೇಲಿರುವ ಅಪವಾದ ಎನ್ನುವುದು ಕಿತ್ತು ಹಾಕಬಹುದು. ಚಿತ್ರರಂಗದಲ್ಲಿರುವವರೆಲ್ಲ ಇದೇ ರೀತಿ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ಇಲ್ಲಿ ಯಾರೂ ದಿನ ಪೂರಾ ಡ್ರಗ್ಸ್​ ತೆಗೆದುಕೊಳ್ಳುತ್ತಾ ಕೂರುವುದಿಲ್ಲ. ನಾವು ಸಹ ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದೇವೆ’ ಎಂದಿದ್ದಾರೆ.

    ಯಶಸ್ವಿಯಾಗಿ 100 ದಿನಗಳನ್ನು ಪೂರೈಸಿದ ‘ಕಾಂತಾರ’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts