More

    ಬೆಂಗಳೂರಿಗರಿಗೆ ಮಿಡಿದ ಸುನೀಲ್ ಶೆಟ್ಟಿ ಮನ; ಮುಂಬೈನಿಂದ ಆಕ್ಸಿಜನ್ ಸಿಲಿಂಡರ್​ ರವಾನೆ

    ಮುಂಬೈ: ಕಳೆದ ಬಾರಿಯ ಕರೊನಾ ಲಾಕ್​ಡೌನ್​ ವೇಳೆ ಬಾಲಿವುಡ್​ನ ಬಹುತೇಕ ಸ್ಟಾರ್ ನಟರು ಮನೆಯಿಂದ ಹೊರಬಂದಿರಲಿಲ್ಲ. ಇದ್ದಲ್ಲಿಂದಲೇ ಕೈಲಾದ ಮಟ್ಟಿಗೆ ಸಹಾಯ ಮಾಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಇದೀಗ ಕರೊನಾ ಎರಡನೇ ಅಲೆ ಶುರುವಾಗಿದ್ದೇ ತಡ, ಬಾಲಿವುಡ್​ ಮಂದಿ ಬೀದಿಗಿಳಿದು ಸಹಾಯಕ್ಕೆ ಸಿದ್ಧರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಕರೊನಾ ವಾರಿಯರ್ಸ್​ಗಳಿಗೆ ಸಲ್ಮಾನ್​ ಖಾನ್ ಊಟದ ವ್ಯವಸ್ಥೆ ಮಾಡಿದ್ದರು. ಅಕ್ಷಯ್ ಕುಮಾರ್, ಅಜಯ್ ದೇವಗನ್, ಸೋನು ಸೂದ್ ಸೇರಿ ಹಲವರು ಬಗೆಬಗೆ ಕೆಲಸಕ್ಕೆ ಮುಂದಾಗಿದ್ದಾರೆ. ಅದೇ ರೀತಿ ನಟ ಸುನೀಲ್ ಶೆಟ್ಟಿ ಇದೀಗ ಆಕ್ಸಿಜನ್ ಸಿಲಿಂಡರ್​ ಪೂರೈಕೆ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಕರೊನಾ ನಡುವೆಯೂ ಚಿತ್ರೀಕರಣ ಮುಂದುವರೆಸಿದ ರಜನಿಕಾಂತ್​

    ದೇಶದಲ್ಲಿ ಎಲ್ಲೆಡೆ ಆಕ್ಸಿಜನ್ ಕೊರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಬಾಲಿವುಡ್​ ಸೆಲೆಬ್ರಿಟಿಗಳು ಸಿಲಿಂಡರ್ ಪೂರೈಕೆ ಜತೆಗೆ ಆಹಾರ ವಿತರಣೆ ಸೇರಿ ಕೋವಿಡ್ ಕೇರ್​ ಕೇಂದ್ರಗಳನ್ನು ತೆರೆಯುತ್ತಿದ್ದಾರೆ. ಇದೀಗ ಕೆವಿಎನ್ ಮತ್ತು ಫೀಡ್​ ಮೈ ಸಿಟಿ ಎನ್​ಜಿಒ ಸಂಸ್ಥೆ ಜತೆಗೆ ಕೈ ಜೋಡಿಸಿರುವ ಸುನೀಲ್ ಶೆಟ್ಟಿ, ಮುಂಬೈ ಮತ್ತು ಬೆಂಗಳೂರಿಗೆ ಆಕ್ಸಿಜನ್ ಸಿಲಿಂಡರ್​ ಪೂರೈಕೆ ಮಾಡಲು ಮುಂದಾಗಿದ್ದಾರೆ.

    ಇದನ್ನೂ ಓದಿ: ಪ್ರಿಯಾಂಕಾ ಕಸಿನ್​ ಎಂಬ ಕಾರಣಕ್ಕೆ ಒಂದೇ ಒಂದು ಸಿನಿಮಾ ಸಿಗಲಿಲ್ಲ …

    ಈ ಬಗ್ಗೆ ಟ್ವಿಟ್ ಮಾಡಿರುವ ಸುನೀಲ್ ಶೆಟ್ಟಿ, ‘ನಾವೀಗ ಗಂಭೀರ ಕಾಲಘಟ್ಟದಲ್ಲಿದ್ದೇವೆ. ಇಂಥ ವಿಷಮ ಹೊತ್ತಿನಲ್ಲೂ ಸಾಕಷ್ಟು ಜನ ನಮ್ಮ ಜತೆಗೆ ಕೈ ಜೋಡಿಸಿದ್ದಾರೆ. ಫೀಡ್​ ಮೈ ಸಿಟಿ ಮತ್ತು ಕೆವಿಎನ್​ ಫೌಂಡೇಷನ್ ವತಿಯಿಂದ ಉಚಿತವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ ಆಕ್ಸಿಜನ್​ ಸಿಲಿಂಡರ್ ವ್ಯವಸ್ಥೆ ಮಾಡುತ್ತಿದ್ದೇವೆ. ಮಿಷನ್ ಮಿಲಿಯನ್ ಏರ್​ ಹೆಸರಿನ ಕಾರ್ಯ ಆರಂಭವಾಗಿದೆ. ಅಗತ್ಯ ಇದ್ದವರು ಸಂಪರ್ಕಿಸಿ ಎಂದೂ ಸುನೀಲ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts