ಬೆಂಗಳೂರು: ವಾಂತಿ-ಭೇದಿ ಎಂದು ಆಸ್ಪತ್ರೆಗೆ ಹೋಗಿದ್ದ ಜೂನಿಯರ್ ಡ್ಯಾನ್ಸರ್, ಹತ್ತನೇ ತರಗತಿಯ ವಿದ್ಯಾರ್ಥಿನಿ ವಾಪಸ್ ಬಂದಿಲ್ಲ. ಅರ್ಥಾತ್, ಆಕೆ ಅಲ್ಲೇ ಸಾವಿಗೀಡಾಗಿದ್ದು, ಕುಟುಂಬಸ್ಥರು ವೈದ್ಯರ ನಿರ್ಲಕ್ಷ್ಯ ಎಂದು ಆರೋಪ ಹೊರಿಸಿದ್ದಾರೆ. ಬೆಂಗಳೂರಿನ ಬಾಗಲಕುಂಟೆಯಲ್ಲಿ ಈ ಪ್ರಕರಣ ನಡೆದಿದೆ.
ಸಿಂಚನ (15) ಸಾವಿಗೀಡಾದ ಬಾಲಕಿ. ಹತ್ತನೇ ತರಗತಿ ವಿದ್ಯಾರ್ಥಿನಿ ಆಗಿರುವ ಈಕೆ ಪಾರ್ಟ್ ಟೈಮ್ ಆಗಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲದೆ ಕೆಲವು ಸಿನಿಮಾಗಳಿಗೆ ಜೂನಿಯರ್ ಡ್ಯಾನ್ಸರ್, ಸಹ ಕಲಾವಿದೆ ಆಗಿಯೂ ಹೋಗುತ್ತಿದ್ದಳು.
ನಿನ್ನೆ ರಾತ್ರಿ ವಾಂತಿ-ಭೇದಿಯಿಂದ ಬಳಲಿ ಅನಾರೋಗ್ಯಗೊಂಡಿದ್ದ ಆಕೆಯನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಆಕೆ ಸಾವಿಗೀಡಾಗಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದಾಗಿ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.