ಧಾರವಾಡ: ನಗರದ ಕಿಲ್ಲಾದ ಶ್ರೀ ಬಾಲಮಾರುತಿ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ 14 ಮತ್ತು 17 ವಯೋಮಿತಿಯ ಬಾಲಕ- ಬಾಲಕಿಯರ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಪಂದ್ಯಾವಳಿ ಸೋಮವಾರ ನಡೆಯಿತು.
14 ವರ್ಷದೊಳಗಿನ ಬಾಲಕರ ಸ್ಪರ್ಧೆಯಲ್ಲಿ ಸಂಕೇತ ಮಾನೆ (ಧಾರವಾಡ), ಅವಿನಾಶ ಎಸ್.ಕೆ. (ಬೆಂಗಳೂರು ದಕ್ಷಿಣ) ಹಾಗೂ ಮುರಳಿ (ಬೆಂಗಳೂರು ದಕ್ಷಿಣ) ಅನುಕ್ರಮ ಸ್ಥಾನ ಗಳಿಸಿ ವೈಯಕ್ತಿಕ ವೀರಾಗ್ರಣಿಯಾದರು.
೧೪ ವರ್ಷದೊಳಗಿನ ಬಾಲಕಿಯರ ಸ್ಪರ್ಧೆಯಲ್ಲಿ ವೈಷ್ಣವಿ ಆಚಾರ್ಯ (ಬೆಂಗಳೂರು ದಕ್ಷಿಣ), ಚಿನ್ಮಯಿ ಎಂ. (ಬೆಂಗಳೂರು ದಕ್ಷಿಣ), ಜನನಿ ಎಸ್. (ತುಮಕೂರು) ಅನುಕ್ರಮ ಸ್ಥಾನ ಗಳಿಸಿ ವೈಯಕ್ತಿಕ ವೀರಾಗ್ರಣಿಯಾದರು.