ಬೆಂಗಳೂರು: ಪ್ರೊ. ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ ನೀತಿ ಸಮಿತಿಯು ರಾಜ್ಯ ಸರ್ಕಾರಕ್ಕೆ ತನ್ನ ಮಧ್ಯಂತರ ವರದಿ ಶಿಾರಸುಗನ್ನು ಸಲ್ಲಿಸಿದೆ.
ವರದಿಯಲ್ಲಿ ಪದವಿಯನ್ನು 4 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ. 4 ವರ್ಷದ ಪದವಿಯಿಂದ ಬಡ, ಗ್ರಾಮೀಣ, ಪರಿಶಿಷ್ಟ ಜಾತಿ ಮತ್ತು ಪಂಗಡದ ಮಕ್ಕಳಿಗೆ ಸ್ನಾತಕ ಪದವಿ ಲಭ್ಯತೆಯನ್ನು ತಗ್ಗಿಸುತ್ತದೆ. ಅಲ್ಲದೆ, 4 ವರ್ಷದ ಪದವಿ ಬೋಧಿಸಲು ಬೇಕಾದ ಮೂಲಸೌಕರ್ಯದ ಕೊರತೆ ಎಂಬ ಕಾರಣವನ್ನು ನೀಡಿದೆ.
ಎನ್ಇಪಿಯಲ್ಲಿದ್ದ ಎಂಟ್ರಿ/ಎಕ್ಸಿಟ್ ನಿಯಮವನ್ನು ಸದ್ಯಕ್ಕೆ ಅಳವಡಿಸಿಕೊಳ್ಳಲಾಗಿದ್ದು, ಅಂತಿಮ ವರದಿ ಸಲ್ಲಿಕೆಯಾದ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು ಎಂಬ ಸೂಚನೆ ನೀಡಿದೆ.