ಬೆಂಗಳೂರು: ಗಾಂಜಾ ಸೇವನೆ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾನೆಂದು ಅನುಮಾನಗೊಂಡ ಯುವಕರು, ಸ್ನೇಹಿತನಿಗೆ ಚೂರಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
ಕುರುಬರಹಳ್ಳಿ ನಿವಾಸಿ ವೆಂಕಟೇಶ್ (27) ಹಲ್ಲೆಗೊಳಗಾದ ಯುವಕ. ಆರೋಪಿಗಳಾದ ಗೌತಮ್, ಆತನ ತಾಯಿ ಹಾಗೂ ಗೆಳೆಯರ ವಿರುದ್ಧ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ ಏಕಾಏಕಿ ಬಂದು ಪತ್ನಿ ಮೃತಪಟ್ಟಿದ್ದಾಳೆ ಎಂದ ಪತಿ; ಸಾವಿನ ಸುತ್ತ ಹಲವು ಅನುಮಾನ
ವೆಂಕಟೇಶ್ ಮತ್ತು ಗೌತಮ್ ಸ್ನೇಹಿತರಾಗಿದ್ದರು. ಗೌತಮ್ ತನ್ನ ಸ್ನೇಹಿತರ ಜತೆ ಗಾಂಜಾ ಸೇವನೆ ಮಾಡುತ್ತಿದ್ದ. ಈ ವಿಚಾರ ಪೊಲೀಸರಿಗೆ ಗೊತ್ತಾಗಿ ಆತನ ಬೆನ್ನು ಬಿದ್ದಿದ್ದರು. ಗಾಂಜಾ ಸೇವನೆ ವಿಚಾರವನ್ನು ಪೊಲೀಸರಿಗೆ ಹೇಳಿದ್ದೀಯಾ ಎಂದು ವೆಂಕಟೇಶ್ ಜತೆ ಜಗಳ ತೆಗೆದಿದ್ದರು.
ಮೇ 11ರಂದು ವೆಂಕಟೇಶ್ಗೆ ಕರೆ ಮಾಡಿದ್ದ ಗೌತಮ್, ನಿನ್ನ ಜೊತೆ ಮಾತನಾಡಬೇಕು, ಹೊರಗೆ ಬಾ ಎಂದು ಹೇಳಿದ್ದ. ರಾತ್ರಿ 10.30ರಲ್ಲಿ ಕುರುಬರಹಳ್ಳಿಯ ಕೆಇಬಿ ಕಚೇರಿ ಸಮೀಪ ಕರೆಸಿಕೊಂಡು, ‘ನಮ್ಮ ಜೊತೆಗಿದ್ದುಕೊಂಡೇ ಪೊಲೀಸರಿಗೆ ಹಾಕಿಕೊಡುತ್ತೀಯಾ’ ಎಂದು ಗೌತಮ್ ತನ್ನ ಸ್ನೇಹಿತರ ಜತೆ ಸೇರಿ ಮನಸೋ ಇಚ್ಛೆ ಥಳಿಸಿದ್ದಾನೆ.
ಇದನ್ನೂ ಓದಿ ಕ್ವಾರಂಟೈನ್ನಲ್ಲಿದ್ದವರು ಹೋಂ ಕ್ವಾರಂಟೈನ್ಗೆ ಶಿಫ್ಟ್
ಬಳಿಕ ಆತನ ಸ್ನೇಹಿತರಿಬ್ಬರೂ ವೆಂಕಟೇಶ್ನನ್ನು ಹಿಡಿದುಕೊಂಡಿದ್ದು, ಗೌತಮ್ ಚೂರಿಯಿಂದ ಹೊಟ್ಟೆಗೆ ಇರಿಯಲು ಮುಂದಾಗಿದ್ದ. ಈ ವೇಳೆ ವೆಂಕಟೇಶ್ ತಪ್ಪಿಸಿಕೊಳ್ಳಲು ಗೌತಮ್ಗೆ ಒದ್ದಿದ್ದು, ಚೂರಿ ಏಟು ತೊಡೆಗೆ ತಗುಲಿದೆ. ಬಳಿಕ ರಕ್ಷಣೆಗಾಗಿ ಕೂಗಿಕೊಂಡಾಗ ಸ್ಥಳೀಯರು ಬರುತ್ತಿದ್ದುದನ್ನು ನೋಡಿ ಅವರು ಅಲ್ಲಿಂದ ಪರಾರಿಯಾಗಿದ್ದರು.
ಹಲ್ಲೆ ಬಳಿಕ ಗೌತಮ್ನ ತಾಯಿ ವೆಂಕಟೇಶ್ಗೆ ಕರೆ ಮಾಡಿ, ಗೌತಮ್ ಬಗ್ಗೆ ನಿನಗಿನ್ನೂ ಗೊತ್ತಿಲ್ಲ. ಅವನನ್ನೇ ಪೊಲೀಸರಿಗೆ ಹಿಡಿದುಕೊಡುತ್ತೀಯಾ. ಇನ್ನೊಮ್ಮೆ ಅವನ ತಂಟೆಗೆ ಬಂದರೆ ಅನಾಥ ಶವವಾಗುತ್ತೀಯಾ ಎಂದು ಬೆದರಿಕೆ ಹಾಕಿದ್ದಾಳೆ! ಗೌತಮ್ ಕೂಡ ಬೇರೆ ಬೇರೆ ನಂಬರ್ಗಳಿಂದ ಕರೆ ಮಾಡಿ, ಈ ವಿಚಾರವನ್ನು ಬೇರೆ ಯಾರಿಗಾದರೂ ಹೇಳಿದರೆ ಗತಿ ಕಾಣಿಸುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ವೆಂಕಟೇಶ್ ದೂರು ಕೊಟ್ಟಿದ್ದಾನೆ.
ತಬ್ಲಿಘಿಗಳು ಪ್ರವೇಶಿಸುತ್ತಿದ್ದಂತೆ ಸೋಂಕು ಕಾಡ್ಗಿಚ್ಚಿನಂತೆ ಹಬ್ಬಿತು…: ಸಿಎಂ ರೂಪಾನಿ