More

    ಜು.15 ರಂದು ಶ್ರೀ ಶನೈಶ್ಚರ ಮಹಾಯಾಗ

    ಮೈಸೂರು ನಗರದ ಅವಧೂತ ದತ್ತಪೀಠ, ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಜು.15 ರಂದು ಶನಿ ತ್ರಯೋದಶಿ ಪ್ರಯುಕ್ತ ಶನೈಶ್ಚರ ಮಹಾಯಾಗ ಆಯೋಜಿಸಲಾಗಿದೆ.


    ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ಆಶೀರ್ವಾದಗಳೊಂದಿಗೆ ಶನೈಶ್ಚರ ಮಹಾಯಾಗವು ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಶನೈಶ್ಚರ ವ್ರತ, ಶನಿಸ್ವಾಮಿಗೆ ತೈಲಾಭಿಷೇಕ, ಶನಿಗ್ರಹ ಜಪ, ಆಂಜನೇಯ ಜಪ, ಶನಿಗ್ರಹ ಹೋಮ, ಶನಿಗ್ರಹ ದಾನಗಳು ಹಾಗೂ ಸುಂದರಕಾಂಡ ಪಾರಾಯಣಗಳು ನಡೆಯಲಿವೆ.

    ಭಕ್ತಾದಿಗಳು ಈ ಸದಾವಕಾಶವನ್ನು ವಿನಿಯೋಗಪಡಿಸಿಕೊಂಡು ಶನೈಶ್ಚರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದತ್ತಪೀಠ ಪ್ರಕಟಣೆಯಲ್ಲಿ ವಿನಂತಿಸಿದೆ.
    ಮಹಾಯಾಗದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ (ಆನ್‌ಲೈನ್ ಮೂಲಕ) ಭಾಗವಹಿಸುವ ಭಕ್ತರೆಲ್ಲರಿಗೂ ಪ್ರಸಾದವನ್ನು ತಲುಪಿಸಲಾಗುವುದು. ಪ್ರತ್ಯಕ್ಷವಾಗಿ ಭಾಗವಹಿಸುವವರು ಸಂಕಲ್ಪ ಮಾಡಿಸಿಕೊಂಡು ತೈಲಾಭಿಷೇಕವನ್ನು ಮಾಡಬಹುದು.

    ಮಕರ, ಕುಂಭ, ಮೀನ ರಾಶಿಗಳವರಿಗೆ ಏಳರಾಟದ ಶನಿ, ಕರ್ಕಾಟಕ ರಾಶಿಯವರಿಗೆ ಅಷ್ಟಮಶನಿ, ವೃಶ್ಚಿಕ ರಾಶಿಯವರಿಗೆ ಅರ್ಧಾಷ್ಟಶನಿ ನಡೆಯುತ್ತಿದೆ. ಆಯಾ ರಾಶಿಗಳವರು ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಂಡು ಶನಿದೋಷವನ್ನು ಪರಿಹರಿಸಿಕೊಳ್ಳಬಹುದಾಗಿದೆ. ಜಾತಕದಲ್ಲಿ ಶನಿಯು ಬಲಹೀನವಾಗಿ ಇರುವವರೂ ಇದರಲ್ಲಿ ಭಾಗವಹಿಸಬಹುದು. ಕೀಲು ನೋವುಗಳಿಂದ ಬಳಲುತ್ತಿರುವವರು, ಸೋಮಾರಿತನದಿಂದ ನಿಗದಿತ ಸಮಯದಲ್ಲಿ ಕೆಲಸಗಳನ್ನು ಮಾಡಲಾಗದೆ ಆಲಸ್ಯ ಮಾಡುವವರೂ ಈ ಪರಿಹಾರ ಪೂಜಾದಿಗಳಲ್ಲಿ ಭಾಗವಹಿಸಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts