More

    ಮಾತಾ-ಪಿತರ ಸೇವೆಯಿಂದ ಪೂರ್ಣತ್ವ: ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ

    ಬೆಳ್ತಂಗಡಿ: ಸುಖ ಶಾಂತಿ ನೆಮ್ಮದಿ ಪ್ರತಿಯೊಂದು ಜೀವರಾಶಿಯ ಆದ್ಯತೆ. ಶಾಶ್ವತ ನೆಮ್ಮದಿಗೆ ಭಕ್ತಿ ಯೋಗವೇ ಸೂತ್ರ. ನಮ್ಮಲ್ಲಿ ಶ್ರದ್ಧೆ -ಭಕ್ತಿ ಇದ್ದರೆ ಭಗವಂತನೇ ನಮ್ಮ ರಕ್ಷಣೆ ಮಾಡುತ್ತಾನೆ. ಮಾತಾ-ಪಿತರ ಸೇವೆಯಿಂದ ನಾವು ಪೂರ್ಣತ್ವ ಪಡೆಯಲು ಸಾಧ್ಯ. ಭಜನೆ ಮಾಡುವುದರಿಂದ ಕಲುಷಿತ ಮನಸ್ಸು ಪರಿಶುದ್ಧಗೊಳ್ಳುವುದು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

    ತಮ್ಮ ಚಾತುರ್ಮಾಸ್ಯದ 19ನೇ ದಿನವಾದ ಭಾನುವಾರ ಶ್ರೀ ಗುರುದೇವ ಮಠದಲ್ಲಿ ಆಶೀರ್ವಚನ ನೀಡಿದರು.

    ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನಾಮಧಾರಿ ಸಮಾಜದ ಬಂಧುಗಳ ಉಪಸ್ಥಿತಿಯಲ್ಲಿ ಪಾದುಕಾ ಪೂಜೆ ನೆರವೇರಿತು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಶಾಸಕ ಹರೀಶ್ ಪೂಂಜ, ನಾಮಧಾರಿ ಸಮಾಜ ಅಧ್ಯಕ್ಷ ಕೃಷ್ಣ ಎನ್.ನಾಯ್ಕ ಆಸರಕೇರಿ, ಪಶ್ಚಿಮ ಘಟ್ಟಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಗೋವಿಂದ ಜೆ.ನಾಯ್ಕ, ಮಾಜಿ ಶಾಸಕ ಜೆ.ಡಿ.ನಾಯ್ಕ, ಪ್ರಮುಖರಾದ ಭವಾನಿಶಂಕರ ನಾಯ್ಕ, ಎಂ.ಜೆ.ನಾಯ್ಕ, ಶ್ರೀಧರ ನಾಯ್ಕ ಭಟ್ಕಳ, ಕೆ.ಆರ್.ನಾಯ್ಕ, ಸತೀಶ ನಾಯ್ಕ, ವೆಂಕಟೇಶ ನಾಯ್ಕ, ಮಂಜಪ್ಪ ನಾಯ್ಕ, ವಿನಾಯಕ ನಾಯ್ಕ, ಕೃಷ್ಣ ನಾಯ್ಕ, ಗಣಪತಿ ನಾಯ್ಕ, ಶಂಕರ್ ನಾಯ್ಕ, ಶ್ರೀಧರ ಹೊನ್ನಪ್ಪ ನಾಯ್ಕ, ಸುಬ್ರಾಯ ನಾಯ್ಕ, ವಿನಾಯಕ ಎಸ್., ವಾಸು ನಾಯ್ಕ, ರಾಜು ಮಹೇಶ್ ನಾಯ್ಕ, ಮಂಜುನಾಥ ನಾಯ್ಕ, ಎಂ.ಡಿ.ನಾಯ್ಕ, ಚಾತುರ್ಮಾಸ್ಯ ಸಮಿತಿ ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

    ಮಚ್ಚಿನ, ಮುಂಡೂರು, ಶಿಬಾಜೆ, ಬೆಳಾಲು, ಭಟ್ಕಳದ ಭಕ್ತವೃಂದದಿಂದ ಭಜನೆ ಕಾರ್ಯಕ್ರಮ ನಡೆಯಿತು. ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಪೂಜಾರಿ ಕಲ್ಲಡ್ಕ ಮತ್ತು ಚಾತುರ್ಮಾಸ್ಯ ಸಮಿತಿ ಸಂಚಾಲಕ ಸೀತಾರಾಮ ಬಿ.ಎಸ್. ಕಾರ್ಯಕ್ರಮ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts