More

    ಶ್ರೀಲೀಲಾಗಿರುವ ವ್ಯಕ್ತಿತ್ವ ಎಲ್ಲಾ ನಟಿಯರಲ್ಲೂ ಇರಬೇಕು, ಕನ್ನಡದ ನಟಿಯನ್ನು ಹೊಗಳಿದ ವಿಡಿಯೋ ವೈರಲ್​..!

    ಕಾಜಲ್ ಅಗರ್ವಾಲ್, ನಂದಮೂರಿ ಬಾಲಕೃಷ್ಣ, ಮತ್ತು ಶ್ರೀ ಲೀಲಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಭಗವಂತ ಕೇಸರಿ’ ಚಿತ್ರ ದಸರಾ ಹಬ್ಬದಂದು ರಿಲೀಸ್​​ ಆಗಲಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​​ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.


    ಇದೇ ಸಿನಿಮಾದ ಪ್ರಚಾರವೊಂದರಲ್ಲಿ ಕಾಜಲ್​​ ಅಗರ್ವಾಲ್​ ಕಾಣಿಸಿಕೊಂಡಿದ್ದು, ‘ಭಗವಂತ್​​ ಕೇಸರಿ’ ಸಿನಿಮಾಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಸಹ ನಟಿ ಶ್ರೀಲೀಲಾ ಬಗ್ಗೆ ಆಸಕ್ತಿದಾಯಕ ಮಾತುಗಳನ್ನಾಡಿ ಕಾಜಲ್​​ ಅಗರ್ವಾಲ್, ಸಂಸಾರ ಮತ್ತು ವ್ಯವಹಾರವನ್ನು ಸಿನಿಮಾ ರಂಗದಲ್ಲಿರುವಂತವರು ಸರಿದೂಗಿಸಿಕೊಂಡು ಹೋಗೋದು ತುಂಬಾ ಕಷ್ಟ. ಆದರೆ ಶ್ರೀಲೀಲಾ ಇವೆರಡನ್ನೂ ಮ್ಯಾನೇಜ್ ಮಾಡುತ್ತಾರೆ. ಅವರಲ್ಲಿ ಸಾಕಷ್ಟು ಸಾಮರ್ಥ್ಯವಿದೆ. ಅವನು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ವಿಧೇಯರಾಗಿರುತ್ತಾರೆ, ಬಹಳ ಕೇಂದ್ರೀಕೃತರಾಗಿರುತ್ತಾರೆ. ಅವರಿಗೆ ಏನು ಬೇಕು ಎಂದು ಅವರಿಗೆ ತಿಳಿದಿದೆ.
    ಇಂತಹ ಗುಣಗಳು ಈಗಿನ ಪೀಳಿಗೆಯ ಎಲ್ಲಾ ನಟಿಯರಲ್ಲಿರಬೇಕು ಎಂದು ಕಾಜಲ್​ ಅಗರ್ವಾಲ್​​ ಹೇಳಿದ್ದಾರೆ.


    ಭಗವಂತ್ ಕೇಸರಿ ಚಿತ್ರಕ್ಕೆ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್‌ ಕಟ್‌ ಹೇಳಿದ್ದಾರೆ. ನಿಮಾವನ್ನು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ನಿರ್ಮಿಸಿದ್ದಾರೆ. ಎಸ್‌ಎಸ್‌ ಥಮನ್ ಸಂಗೀತ ಸಂಯೋಜಿಸಿದ್ದಾರೆ.

    ತೆಲಂಗಾಣ ಬ್ಯಾಕ್ ಡ್ರಾಪ್‌ನಲ್ಲಿನ ತಂದೆ ಮತ್ತು ಮಗಳ ನಡುವಿನ ಭಾವನಾತ್ಮಕ ಬಾಂಧವ್ಯದ ಕುರಿತ ಚಿತ್ರವೇ ಭಗವಂತ್‌ ಕೇಸರಿ. ಅಕ್ಟೋಬರ್ 19 ರಂದು ಸಿನಿಮಾ ರಿಲೀಸ್​ಗೆ ರೆಡಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts