More

    ಶಿವ-ಪಾರ್ವತಿಯರಿಗೆ ವಿಶೇಷ ಪೂಜೆ

    ವಿಜಯವಾಣಿ ಸುದ್ದಿಜಾಲ ಬಂಕಾಪುರ

    ಪಟ್ಟಣದ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಲೋಕ ಕಲ್ಯಾಣಾರ್ಥ, ವಿಶ್ವ ಶಾಂತಿ ಹಾಗೂ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಮಾರಕ ಕರೊನಾ ರೋಗ ನಿವಾರಣೆಗಾಗಿ ನವಗ್ರಹ ಶಾಂತಿ, ಹೋಮ, ಹವನಾದಿಗಳೊಂದಿಗೆ ಶಿವ-ಪಾರ್ವತಿಯರಿಗೆ ವಿಶೇಷ ಪೂಜೆ ಗುರುವಾ ನಡೆಯಿತು.

    ಬಿಸನಳ್ಳಿ ಕಾಶಿ ಶಾಖಾ ಮಠದ ವೇದ, ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕ ಜಗದೀಶ ಶಾಸ್ತ್ರೀಗಳವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ಪ್ರಾತಃಕಾಲ ಶಿರಡಿ ಸಾಯಿಬಾಬಾರವರಿಗೆ ವಿವಿಧ ಪೂಜಾ ಕೈಂಕರ್ಯ, ರುದ್ರಾಣಿ ಬಳಗದ ತಾಯಂದಿರಿಂದ ರುದ್ರಪಠಣ, ಸಹಸ್ರ ನಾಮಾವಳಿ, ಭಕ್ತಿಗೀತೆಗಳ ಆರಾಧನೆ, ಭಜನಾ ಕಾರ್ಯಕ್ರಮ ನಡೆದವು.

    ಜಗದೀಶ ಶಾಸ್ತ್ರೀಗಳು ಮಾತನಾಡಿ, ಶಿರಡಿ ಸಾಯಿ ಬಾಬಾರು ಭಕ್ತರ ಕಷ್ಟ, ಕಾರ್ಪಣ್ಯ ದೂರ ಮಾಡುತ್ತಾರೆ. ಈ ನಿಟ್ಟಿನಲ್ಲಿ ಜಗತ್ತಿನಾದ್ಯಂತ ವ್ಯಾಪಿಸಿರುವ ಕರೊನಾ ಸೋಂಕು ನಿವಾರಣೆಗಾಗಿ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಶ್ರೀ ಶಿರಡಿ ಸೇವಾ ಸಮಿತಿಯವರು ಲೋಕಕಲ್ಯಾಣಾರ್ಥವಾಗಿ ಹಮ್ಮಿಕೊಂಡ ಈ ಕಾರ್ಯ ಮಹತ್ವಪೂರ್ಣ ಕಾರ್ಯ ಎಂದರು.

    ಬಸಯ್ಯಶಾಸ್ತ್ರೀ ಚಿಕ್ಕಮಠ, ಶಿರಡಿ ಸೇವಾ ಸಮಿತಿ ಅಧ್ಯಕ್ಷ ರವೀಂದ್ರ ವೆರ್ಣೆಕರ, ಮಂಜುನಾಥ ವಳಗೇರಿ, ಮಂಜುನಾಥಗೌಡ ಪಾಟೀಲ, ವೆಂಕಟೇಶ ದೈವಜ್ಞ, ಹನಮಂತಪ್ಪ ಯು.ವಿ., ಸತೀಶ ವಳಗೇರಿ, ರವಿ ಕುರಗೋಡಿ, ಆನಂದ ವಳಗೇರಿ, ಶಂಭಣ್ಣ ಶೆಟ್ಟರ, ರುದ್ರಾಣಿ ಬಳಗದ ತಾಯಂದಿರಾದ ಶೋಭಾ ಅಕ್ಕಿ, ಮಧುಮತಿ ಶಿಡ್ಲಾಪುರ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts