ಮುಂಬೈ: ಭಾರತೀಯ ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳು ತಮ್ಮದೇ ಆದ ಛಾಪು ಮೂಡಿಸಿದ್ದು, ದೇಶಾದ್ಯಂತ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದೆ.
ಇಲ್ಲಿನ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ಭಾರೀ ಯಶಸ್ಸನ್ನು ಕಾಣುತ್ತಿವೆ.
ದಕ್ಷಿಣದ ಸಿನಿಮಾಗಳ ಗೆಲುವಿಗೆ ಬಾಲಿವುಡ್ ಮಂದಿಯಲ್ಲಿ ಕೆಲವ ರು ಅಸಮಾಧಾನ ಹೊರಹಾಕಿದರೆ,ಮತ್ತೆ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದೀಗ ಬಾಲಿವುಡ್ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್ ಜೋಹರ್ ಅವರು ಕೂಡ ದಕ್ಷಿಣದ ಸಿನಿಮಾಗಳನ್ನು ಹಾಗೂ ನಿರ್ದೇಶಕರನ್ನು ಹಾಡಿ ಹೊಗಳಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಗುಣಮಟ್ಟವನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಆರ್ಆರ್ಆರ್, ಕೆಜಿಎಫ್ ಮತ್ತು ಪುಷ್ಪ ಸಿನಿಮಾ ಗೆಲ್ಲಲು ನಿರ್ದೇಶಕರ ಪಾತ್ರ ಬಹುಮುಖ್ಯವಾಗಿದ್ದು, ತಮ್ಮ ನಿಲುವನ್ನು ತೋರಿಸಿಕೊಟ್ಟಿದ್ದಾರೆ. ಈ ಚಿತ್ರಗಳು ನಮ್ಮ ಭಾರತೀಯ ಸಿನಿಮಾ ರಂಗವೇ ಆಗಿರುವುದರಿಂದ ತುಂಬಾ ಹೆಮ್ಮೆ ಎನಿಸುತ್ತದೆ. ಭಾರತದ ಸಿನಿಮಾದ ಭಾಗವಾಗಿರುವುದು ನಮ್ಮ ಹೆಮ್ಮೆ ಎಂದಿರುವ ಅವರು ಪ್ರಶಾಂತ್ ನೀಲ್, ಎಸ್ಎಸ್ರಾಜಮೌಳಿ, ಮತ್ತು ಸುಕುಮಾರ್ ಅಂತಹ ಪ್ರತಿಭಾನ್ವಿತ ನಿರ್ದೇಶಕರು ನಮ್ಮಲ್ಲಿ ಇದ್ದಾರೆ ಎನ್ನುವುದೇ ಖುಷಿ ಎಂದಿದ್ದಾರೆ. ಸದ್ಯ ಬಾಲಿವುಡ್ನಲ್ಲಿ ಭೂಲ್ ಭುಲಯ್ಯಾ 2 ಚಿತ್ರ ಬಿಡುಗಡೆಗೊಂಡಿದ್ದು, ಇದೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಯಾವ ಭಾಷೆಯಲ್ಲಿ ನಿರ್ಮಾಣವಾದರೂ ಅದು ಭಾರತೀಯ ಸಿನಿಮಾದ ಭಾಗವೇ ಆಗಿದೆ ಎಂದು ಅಕ್ಷಯ್ ಕುಮಾರ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್)