More

    ದಕ್ಷಿಣದ ಸಿನಿಮಾಗಳನ್ನು ಹಾಡಿ ಹೊಗಳಿದ ಬಾಲಿವುಡ್​ ನಿರ್ದೇಶಕ ಕರಣ್​ ಜೋಹರ್​: ಕೆಜಿಎಫ್​​,ಪುಷ್ಪ ,ಆರ್​ಆರ್​​ಆರ್​ ಬಗ್ಗೆ ಹೇಳಿದ್ದೇನು ಗೊತ್ತಾ?

    ಮುಂಬೈ: ಭಾರತೀಯ ಚಿತ್ರರಂಗದಲ್ಲಿ ದಕ್ಷಿಣದ ಸಿನಿಮಾಗಳು ತಮ್ಮದೇ ಆದ ಛಾಪು ಮೂಡಿಸಿದ್ದು, ದೇಶಾದ್ಯಂತ ಅಭಿಮಾನಿ ಬಳಗವನ್ನು ಹೆಚ್ಚಿಸಿಕೊಂಡಿದೆ.
    ಇಲ್ಲಿನ ಸಿನಿಮಾಗಳೇ ಹೆಚ್ಚು ಸದ್ದು ಮಾಡುತ್ತಿದ್ದು, ಭಾರೀ ಯಶಸ್ಸನ್ನು ಕಾಣುತ್ತಿವೆ.

    ದಕ್ಷಿಣದ ಸಿನಿಮಾಗಳ ಗೆಲುವಿಗೆ ಬಾಲಿವುಡ್​ ಮಂದಿಯಲ್ಲಿ ಕೆಲವ ರು ಅಸಮಾಧಾನ ಹೊರಹಾಕಿದರೆ,ಮತ್ತೆ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.ಇದೀಗ ಬಾಲಿವುಡ್​ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ಕರಣ್​ ಜೋಹರ್​ ಅವರು ಕೂಡ ದಕ್ಷಿಣದ ಸಿನಿಮಾಗಳನ್ನು ಹಾಗೂ ನಿರ್ದೇಶಕರನ್ನು ಹಾಡಿ ಹೊಗಳಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಗುಣಮಟ್ಟವನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

    ಆರ್​ಆರ್​ಆರ್​, ಕೆಜಿಎಫ್​​ ಮತ್ತು ಪುಷ್ಪ ಸಿನಿಮಾ ಗೆಲ್ಲಲು ನಿರ್ದೇಶಕರ ಪಾತ್ರ ಬಹುಮುಖ್ಯವಾಗಿದ್ದು, ತಮ್ಮ ನಿಲುವನ್ನು ತೋರಿಸಿಕೊಟ್ಟಿದ್ದಾರೆ. ಈ ಚಿತ್ರಗಳು ನಮ್ಮ ಭಾರತೀಯ ಸಿನಿಮಾ ರಂಗವೇ ಆಗಿರುವುದರಿಂದ ತುಂಬಾ ಹೆಮ್ಮೆ ಎನಿಸುತ್ತದೆ. ಭಾರತದ ಸಿನಿಮಾದ ಭಾಗವಾಗಿರುವುದು ನಮ್ಮ ಹೆಮ್ಮೆ ಎಂದಿರುವ ಅವರು ಪ್ರಶಾಂತ್​ ನೀಲ್​, ಎಸ್​ಎಸ್​​ರಾಜಮೌಳಿ, ಮತ್ತು ಸುಕುಮಾರ್​ ಅಂತಹ ಪ್ರತಿಭಾನ್ವಿತ ನಿರ್ದೇಶಕರು ನಮ್ಮಲ್ಲಿ ಇದ್ದಾರೆ ಎನ್ನುವುದೇ ಖುಷಿ ಎಂದಿದ್ದಾರೆ. ಸದ್ಯ ಬಾಲಿವುಡ್​ನಲ್ಲಿ ಭೂಲ್​ ಭುಲಯ್ಯಾ 2 ಚಿತ್ರ ಬಿಡುಗಡೆಗೊಂಡಿದ್ದು, ಇದೂ ಪ್ರೇಕ್ಷಕರನ್ನು ಸೆಳೆಯುತ್ತಿದೆ ಎಂದು ಹೇಳಿಕೊಂಡಿದ್ದಾರೆ.

    ಯಾವ ಭಾಷೆಯಲ್ಲಿ ನಿರ್ಮಾಣವಾದರೂ ಅದು ಭಾರತೀಯ ಸಿನಿಮಾದ ಭಾಗವೇ ಆಗಿದೆ ಎಂದು ಅಕ್ಷಯ್​ ಕುಮಾರ್​ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. (ಏಜೆನ್ಸೀಸ್​)

    ಬಾಲಿವುಡ್​​ v/s ದಕ್ಷಿಣ ಸಿನಿಮಾ ಅಂದ್ರೇನೆ ನನಗೆ ಕೆಟ್ಟ ಕೋಪ ಬರುತ್ತೆ: ಅಕ್ಷಯ್​ ಕುಮಾರ್​ ಹೀಗಂದಿದ್ದು ಯಾಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts