ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ತೀರಾ ಬೇಸರ ತಂದಿರುವುದಾಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ ಸಂಸದರ ಸಭೆಯಲ್ಲಿ ಅಸಮಾಧಾನ ತೋಡಿಕೊಂಡಿದ್ದಾರೆ.
ಕರೊನಾ 2ನೇ ಅಲೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಕಾರ್ಯತಂತ್ರ ಸಿದ್ಧಪಡಿಸುವ ಉದ್ದೇಶದಿಂದ ಶುಕ್ರವಾರ ಕರೆಯಲಾಗಿದ್ದ ಸಂಸತ್ನ ಎರಡೂ ಸದನಗಳ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆಯನ್ನು ನಮ್ರತೆಯಿಂದ ಸ್ವೀಕರಿಸೋಣ. ಪಕ್ಷ ಬಲವರ್ಧನೆಗೆ ಆದ್ಯತೆ ನೀಡೋಣವೆಂದು ಫಲಿತಾಂಶದ ಬಳಿಕ ಕರೆದಿದ್ದ ಮೊದಲ ಸಭೆಯಲ್ಲಿ ಸೋನಿಯಾ ಪಕ್ಷದ ಮುಖಂಡರಿಗೆ ವಿಶ್ವಾಸ ತುಂಬಿದರು.
ಒಗ್ಗಟ್ಟಿನ ಹೋರಾಟ: ಕೋವಿಡ್ ವಿರುದ್ಧದ ಹೋರಾಟ ರಾಜಕೀಯ ಭಿನ್ನಾಭಿಪ್ರಾಯ ಮೀರಿದ್ದಾಗಿದ್ದು, ಎಲ್ಲರೂ ರಾಷ್ಟŠಮಟ್ಟದಲ್ಲಿ ಒಟ್ಟಾಗಿ ಕೈಜೋಡಿಸಿ ಒಗ್ಗಟ್ಟಿನಿಂದ ಹೋರಾಡಬೇಕೆಂದು ಸೋನಿಯಾ ಇದೇ ಸಂದರ್ಭದಲ್ಲಿ ಕರೆ ನೀಡಿದರು.