ಬೆಂಗಳೂರು: ಪೆಟ್ಟಾದರೂ ಛಲ ಕುಂದಿಲ್ಲ, ಕೊನೆಯ ಉಸಿರು ಇರುವವರೆಗೂ ದೇಶಕ್ಕಾಗಿ ಹೋರಾಡುತ್ತೇನೆ.. ಎಂಬುದಾಗಿ ವೀರಯೋಧ ನಾಯಕ್ ಎಚ್.ಎನ್. ಮಹೇಶ್ ತಮ್ಮ ವೀರೋಚಿತ ಮಾತುಗಳನ್ನು ಇದೀಗ ವಿಜಯವಾಣಿ-ದಿಗ್ವಿಜಯ ನ್ಯೂಸ್ ಕ್ಲಬ್ಹೌಸ್ ಸಂವಾದದಲ್ಲಿ ತಮ್ಮ ಅನಿಸಿಕೆ-ಅನುಭವ ಹಂಚಿಕೊಂಡರು.
ಉಗ್ರರ ವಿರುದ್ಧದ ಮಿಲಿಟರಿ ಆಪರೇಷನ್ ಒಂದರಲ್ಲಿ ನಾಲ್ವರು ಉಗ್ರರನ್ನು ಸದೆಬಡಿದು ಕಣ್ಣುಗಳಿಗೆ ಗಾಯವಾಗಿ ಪ್ರಾಣಾಪಾಯದಿಂದ ಪಾರಾಗಿ, ಶೌರ್ಯ ಪ್ರಶಸ್ತಿಯನ್ನೂ ಪಡೆದಿರುವ ನಾಯಕ್ ಎಚ್.ಎನ್. ಮಹೇಶ್ ಅವರು ತಮ್ಮ ಹೋರಾಟದ ರೋಚಕ ಅನುಭವಗಳನ್ನು ಸ್ವಾತಂತ್ರ್ಯೋತ್ಸವ ಮುನ್ನಾ ದಿನವಾದ ಇಂದು ವಿಜಯವಾಣಿ ಕ್ಲಬ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
2019ರಲ್ಲಿ ಈ ಕಾರ್ಯಾಚರಣೆಯಲ್ಲಿ ನನಗೆ ಪೆಟ್ಟಾಯಿತು. ಹಾಗೆ ಪೆಟ್ಟಾದರೂ ಛಲ ಇನ್ನೂ ಇದೆ. ನನ್ನ ಸೇವೆ ಇನ್ನೂ ಮುಗಿದಿಲ್ಲ, ಕೊನೆಯುಸಿರು ಇರುವವರೆಗೂ ಸೇನೆಯಲ್ಲಿ ಹೋರಾಡುತ್ತೇನೆ ಎಂಬುದಾಗಿ ಮಹೇಶ್ ಹೇಳಿಕೊಂಡಿದ್ದಾರೆ.
ಇನ್ನು ತಾವು ಸೇನೆಗೆ ಸೇರಿದ ಅನುಭವಗಳನ್ನು ಹಂಚಿಕೊಂಡಿರುವ ಮಹೇಶ್, ಸೇನೆಯ ಸೆಲೆಕ್ಷನ್ನಲ್ಲಿ ಸೋತು ಸೇರಲಾಗದೆ ಇರುವವರಿಂದಲೇ ಹೆಚ್ಚು ಕಲಿತಿದ್ದೇನೆ. ಏಕೆಂದರೆ ಅವರಿಗೆ ನೆಗೆಟಿವ್ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ ಎಂದಿರುವ ಅವರು, ಸೇನೆಯ ಕುರಿತ ಹಲವಾರು ಅಂಶಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಇನ್ನು ನೇರವಾಗಿ ಹೋರಾಡಲು ಧೈರ್ಯ-ತಾಕತ್ತು ಇಲ್ಲದ ಉಗ್ರರು ಡ್ರೋಣ್ ಬಳಸುತ್ತಿದ್ದಾರೆ ಎಂದರು.
ಸಂವಾದದಲ್ಲಿ ಪಾಲ್ಗೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ: https://www.clubhouse.com/event/Pbo5eBbx