ಕೊಪ್ಪಳ:ಮಾಜಿ ಸಚಿವ ಸಿ.ಟಿ.ರವಿ ಕುಟುಂಬ ಸಮೇತ ಶುಕ್ರವಾರ ನಗರದ ಗವಿಮಠಕ್ಕೆ ಭೇಟಿ ನೀಡಿ ಗವಿಶ್ರೀಗಳ ಆಶೀರ್ವಾದ ಪಡೆದರು.
ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರವಿ ದಂಪತಿ ಮಠದಲ್ಲಿ ಅಭಿನವ ಗವಿಶ್ರೀಗಳನ್ನು ಸಂದರ್ಶಿಸಿ ಕೆಲ ಕಾಲ ಮಾತುಕತೆ ನಡೆಸಿದರು. ಗವಿಮಠ ಪರಂಪರೆ, ಜಾತ್ರೋತ್ಸವ ಬಗ್ಗೆ ಮಾಹಿತಿ ಪಡೆದರು. ಮಠಕ್ಕೆ ಗಣ್ಯರು ಭೇಟಿ ನೀಡಿದ ೋಟೋಗಳನ್ನು ವೀಸಿದರು.
ಬಳಿಕ ಶ್ರೀಗಳು ದಂಪತಿಯನ್ನು ಸನ್ಮಾನಿಸಿದರು. ಬಿಜೆಪಿ ಪ್ರಮುಖರಾದ ವಿರುಪಾಕ್ಷಪ್ಪ ಸಿಂಗನಾಳ, ಚಂದ್ರಶೇಖರ್ ಪಾಟೀಲ್ ಹಲಗೇರಿ, ಮಂಜುನಾಥ ಅಂಗಡಿ, ತಿಪ್ಪೇರುದ್ರಸ್ವಾಮಿ ಇತರರಿದ್ದರು.