More

    ಹೈನುಗಾರಿಕೆಗೆ ಆದ್ಯತೆ ನೀಡಬೇಕು

    ಸಿರಿಗೆರೆ: ಹೈನುಗಾರಿಕೆ ಸ್ವ ಉದ್ಯೋಗವಾಗಿದ್ದು ಆರ್ಥಿಕ ಸ್ವಾವಲಂಬನೆಗೆ ಆಧಾರವಾಗಿದೆ ಜಿಪಂ ಸದಸ್ಯ ಟಿ.ಎಂ.ತಿಪ್ಪೇಸ್ವಾಮಿ ಹೇಳಿದರು.

    ಚಿತ್ರದುರ್ಗದ ಪಶುಪಾಲನೆ ಹಾಗೂ ವೈದ್ಯ ಸೇವಾ ಇಲಾಖೆ, ಶಿವಮೊಗ್ಗ ಹಾಲು ಒಕ್ಕೂಟ, ಹಾಲು ಉತ್ಪಾದಕ ಸಂಘದಿಂದ ಸಮೀಪದ ಹಳುವುದರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಾನುವಾರುಗಳಿಗೆ ಉಚಿತ ಚಿಕಿತ್ಸೆ ಶಿಬಿರದಲ್ಲಿ ಮಾತನಾಡಿದರು.

    ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಕೃಷ್ಣಪ್ಪ ಮಾತನಾಡಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

    ಗ್ರಾಮದ ಮುಖಂಡ ಸಿದ್ದಲಿಂಗಪ್ಪ ಮಾತನಾಡಿದರು. ಹೆಚ್ಚು ಹಾಲು ಕರೆಯುವ ಹಸುಗಳ ಸ್ಪರ್ಧೆಯಲ್ಲಿ 1ನೇ ಸ್ಥಾನ ಎಚ್.ಹನುಮಂತಪ್ಪ, 2-ಎಚ್.ಜಿ.ಶಿವಮೂರ್ತಪ್ಪ, 3-ಕರಿಬಸಪ್ಪ, 4-ಎಚ್.ಇ.ನರೇಂದ್ರ, 5-ಇಂದ್ರಪ್ಪ, 6ನೇ ಸ್ಥಾನ ಎಚ್.ಆರ್.ಮರುಳಸಿದ್ದಪ್ಪ ಅವರ ಹಸು ಪಡೆದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts