More

    ನೆಹರು ಸ್ವಾರ್ಥಕ್ಕೆ ಹಲವು ತಪ್ಪುಗಳು

    ಚಿತ್ರದುರ್ಗ: ಜವಾಹರಲಾಲ್ ನೆಹರು ಸ್ವಾರ್ಥ ರಾಜಕಾರಣದಿಂದಾಗಿ ದೇಶದಲ್ಲಿ ಆದ ಹಲವು ತಪ್ಪುಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಇಂದು ಸರಿಪಡಿಸುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗಣರಾಜ್ಯೋತ್ಸವದಲ್ಲಿ ಮಾತನಾಡಿ, ಸ್ವಾತಂತ್ರ್ಯದ ಬಳಿಕ ಅಂದಿನ ಪ್ರಧಾನಿ ನೆಹರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದರು. ಇದನ್ನು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ಶ್ಯಾಮ ಪ್ರಸಾದ್ ಮುಖರ್ಜಿ ವಿರೋಧಿಸಿದ್ದರು. ಜತೆಗೆ ಸಚಿವ ಸ್ಥಾನಕ್ಕೆ ಮುಖರ್ಜಿ ರಾಜೀನಾಮೆ ನೀಡಿ ಹೋರಾಟ ಆರಂಭಿಸಿದ್ದರು ಎಂದರು.

    ಪಕ್ಷದ ಜಿಲ್ಲಾಧ್ಯಕ್ಷ ಎ.ಮುರುಳಿ ಧ್ವಜಾರೋಹಣ ನೆರವೇರಿಸಿದರು. ಉಟ್ಟ ಬಟ್ಟೆಯಲ್ಲಿ ಬಂದವರು ಕೃತಿಯನ್ನು ಈ ವೇಳೆ ಬಿಡುಗಡೆ ಮಾಡಲಾಯಿತು. ಪೌರತ್ವ ತಿದ್ದುಪಡಿ ಕಾಯಿದೆ ಬೆಂಬಲಿಸಿ ಸಹಿ ಸಂಗ್ರಹಿಸಲಾಯಿತು.

    ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಮಾಜಿ ಅಧ್ಯಕ್ಷರಾದ ಟಿ.ಜಿ.ನರೇಂದ್ರನಾಥ್, ಸಿದ್ದೇಶ್‌ಯಾದವ್, ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ನಗರಾಧ್ಯಕ್ಷ ಶಶಿಧರ್, ಶ್ಯಾಮಲಾ ಶಿವಪ್ರಕಾಶ್, ಅಸ್ಲಾಂ ಪಾಷ, ರತ್ನಮ್ಮ, ರೇಖಾ, ಚಂದ್ರಿಕಾ, ಬಸಮ್ಮ, ಶಾಂತಮ್ಮ, ಗುರುರಾಜ್, ಟೈಗರ್ ತಿಪ್ಪೇಸ್ವಾಮಿ, ಕಮಲೇಶ್ ಜೈನ್, ಕಲ್ಲೇಶಯ್ಯ, ಜಿತೇಂದ್ರ, ಶಂಭು ಮತ್ತಿತರರು ಇದ್ದರು.

    ಮುಖಂಡ ವೆಂಕಟೇಶ್ ಯಾದವ್ ಸ್ವಾಗತಿಸಿದರು. ನಾಗರಾಜ್ ಬೇದ್ರೆ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts