More

    ಸಮಾಜದ ಅಭಿವೃದ್ಧಿಗಾಗಿ ಧ್ವನಿ ಎತ್ತಿ

    ಸಿಂದಗಿ: ಪಟ್ಟಣದಲ್ಲಿ ತಾಲೂಕು ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಸ್ಥೆಯವರು ಮುಂಬರುವ ಅಧಿವೇಶನದಲ್ಲಿ ಸಮಾಜದ ಅಭಿವೃದ್ಧಿಪರ ಕಾರ್ಯಗಳ ಕುರಿತು ಧ್ವನಿ ಎತ್ತುವಂತೆ ಆಗ್ರಹಿಸಿ ಶಾಸಕ ಎಂ.ಸಿ. ಮನಗೂಳಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
    ಮುಖಂಡರು ಮಾತನಾಡಿ, ನಮ್ಮ ಸಮಾಜ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಾಕಷ್ಟು ಬಾರಿ ಸರ್ಕಾರಗಳಿಗೆ ಬೇಡಿಕೆಗಳ ಕುರಿತು ಮನವಿ ನೀಡಿ ಸಾಕಾಗಿದೆ. ಹೋರಾಟ ಮಾಡಿಯೂ ಸೋತಿದ್ದೇವೆ. ನಮ್ಮ ಮನವಿಗೆ ಸ್ಪಂದಿಸುವ ಸರ್ಕಾರಗಳು ಬಂದಿಲ್ಲ ಎಂದು ದೂರಿದರು.
    ಸಮಾಜದ ಅಧ್ಯಕ್ಷ ಮಾಂತೇಶ ಮೂಲಿಮನಿ, ಉಪಾಧ್ಯಕ್ಷ ಶ್ರೀಶೈಲ ಹಡಪದ, ಮಂಜುನಾಥ ಹಡಪದ, ಕಾರ್ಯದರ್ಶಿ ಶಿವಶರಣ ಸಿಂದಗಿ, ಶಿವಾನಂದ ಹಡಪದ, ರಾಮಚಂದ್ರ ಗೊರವಗುಂಡಗಿ, ರಾಜು ಯಂಕಂಚಿ, ನೀಲಕಂಠ ಹಡಪದ (ವಂದಾಲ) ಸೇರಿ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts