More

    VIDEO| ರೆಡ್​ ಲೈಟ್​ ಇದ್ರೂ ಸಿಗ್ನಲ್​ ಜಂಪ್​: ಬೆಳ್ಳಂಬೆಳಗ್ಗೆ ಟೆಕ್ಕಿ ಸೇರಿ ಐವರು ಯುವಕರ ಸಾವು

    ಹೈದರಾಬಾದ್​: ಇಂದು ನಸುಕಿನ ಜಾವ ಹೈದರಾಬಾದ್​ನ ವಿಪ್ರೋ ಸರ್ಕಲ್​ ಬಳಿ ಟಿಪ್ಪರ್​ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಟೆಕ್​ ಮಹೀಂದ್ರಾ ಕಂಪನಿಯ ಉದ್ಯೋಗಿ ಸೇರಿದಂತೆ ಐವರು ದಾರುಣವಾಗಿ ಮೃತಪಟ್ಟಿದ್ದಾರೆ.

    ನಸುಕಿನ ಜಾವ 3 ಗಂಟೆ ಸುಮಾರಿಗೆ ಸ್ವಿಫ್ಟ್​ ಕಾರು ಹೈದರಾಬಾದ್​ನ ಐಐಐಟಿಯಿಂದ ಬರುತ್ತಿತ್ತು. ಗಚಿಬೌಲಿ ಕಡೆ ತೆರಳುವಾಗ ವಿಪ್ರೋ ಸರ್ಕಲ್​ ಬಳಿಯಿರುವ ಸಿಗ್ನಲ್​ನಲ್ಲಿ ಕೆಂಪು ಬಣ್ಣದ ಎಚ್ಚರಿಕೆ ಸೂಚನೆಯಿದ್ದರೂ ಸಿಗ್ನಲ್​ ಕ್ರಾಸ್​ ಮಾಡುವಾಗ ಅಪಘಾತ ಸಂಭವಿಸಿದೆ. ಎದುರುಗಡೆಯಿಂದ ಅದೇ ಸಮಯದಲ್ಲಿ ಕೊಕಪೇಟೆಯಿಂದ ಐಐಐಟಿ ಕಡೆಗೆ ಬರುತ್ತಿದ್ದ ಟಿಪ್ಪರ್​ ಲಾರಿ, ಕಾರಿಗೆ ಡಿಕ್ಕಿ ಹೊಡೆದಿದೆ.

    ಇದನ್ನೂ ಓದಿ: ಚಲಿಸುತ್ತಿದ್ದ ಬಸ್​ನಿಂದ ಹೊರ ಜಿಗಿದ ಓರ್ವ ಯುವಕ, ಇಬ್ಬರು ಯುವತಿಯರು

    ಪೊಲೀಸ್​ ಮೂಲಗಳ ಪ್ರಕಾರ ಸ್ಥಳದಲ್ಲೇ ನಾಲ್ವರು ಮೃತಪಟ್ಟರೆ, ಓರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅಸುನೀಗಿದ್ದಾರೆ. ಮೃತರನ್ನು ಕಾತ್ರಗಡ್ಡ ಸಂತೋಷ್​ (25), ಟೆಕ್​ ಮಹೀಂದ್ರಾ ಕಂಪನಿಯಲ್ಲಿ ಸಾಫ್ಟ್​ವೇರ್​ ಇಂಜಿನಿಯರ್ ಆಗಿರುವ ಕೊಲ್ಲೂರು ಪವನ್​ ಕುಮಾರ್​ (24), ಚಿಂತ ಮನೋಹರ್​ (23), ಪಪ್ಪು ಭಾರಧ್ವಜ್​ (20) ಮತ್ತು ನಾಗಿಸೆಟ್ಟಿ ರೋಶನ್​ (23) ಎಂದು ಗುರುತಿಸಲಾಗಿದೆ.

    ಘಟನಾ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​​)​

    (ವಿಡಿಯೋ ಕೃಪೆ: ನ್ಯೂಸ್​ ಮೀಟರ್​)

    VIDEO| ಬಾಲ್​ ನೋಡದೆ ಸಿಕ್ಸರ್​ ಸಿಡಿಸಿದ ಫ್ಲೆಚರ್: ವೈರಲ್​​ ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts