More

    ‘ಕೊಬ್ಬಿದ ಹಸು ತಿನ್ನುವ ಬಗ್ಗೆ ಶ್ಲೋಕವೂ ಇದೆ, ಧರ್ಮದ ಪುಸ್ತಕ ಓದಿದರೆ ತಲೆ ಕೆಡುತ್ತದೆ’

    ಮೈಸೂರು: ಕಾಂಗ್ರೆಸ್​ ನಾಯಕ ಸಿದ್ದರಾಮಯ್ಯ ಮತ್ತೊಮ್ಮೆ ಗೋ ಮಾಂಸ ತಿನ್ನುವುದರ ಬಗ್ಗೆ ಮಾತನಾಡಿದ್ದಾರೆ. ಕೊಬ್ಬಿದ ಹಸುವನ್ನು ತಿನ್ನುವುದರ ಬಗ್ಗೆ ಶ್ಲೋಕವೂ ಇದೆ ಎಂದು ಅವರು ವೇದಿಕೆಯ ಮೇಲೆ ತಿಳಿಸಿದ್ದಾರೆ.

    ಮೈಸೂರಿನಲ್ಲಿ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು ಈ ಮಾತನ್ನು ಹೇಳಿದ್ದಾರೆ. ಕೊಬ್ಬಿದ ಹಸು ತಿನ್ನುವ ಬಗ್ಗೆ ಶ್ಲೋಕ ಇದೆ. ಅದು ನನಗೆ ಸಿಕ್ಕಿಲ್ಲ. ಸಿಕ್ಕರೆ ನನಗೆ ಕೊಡು ಎಂದು ಮಲ್ಲಿಕಾ ಘಂಟಿಗೆ ಕೇಳಿದ್ದೇನೆ. ಮಾಲಗತ್ತಿ ಅವರೆ, ನಿಮಗೆ ಸಿಕ್ಕರೆ ನೀವೇ ಕೊಡಿ. ನಾನು ಶ್ಲೋಕದಲ್ಲಿ ಇರೋದನ್ನೇ ಹೇಳುತ್ತೇನೆ. ಬೇರೆ ಹೇಳಿದರೆ ಆರ್​ಎಸ್​ಎಸ್​ ಅವರು ಅದನ್ನೂ ವಿವಾದ ಮಾಡಿಬಿಡುತ್ತಾರೆ. ಎಲ್ಲದಕ್ಕೂ ರಂಗು ರಂಗಿನ ಬಣ್ಣ ಹಚ್ಚುತ್ತಾರೆ. ನೀವು ಹೇಳಿದರೆ ವಿವಾದ ಆಗಲ್ಲ. ಆದರೆ ನಿಮ್ಮಲ್ಲೂ ಕೆಲವರು ಹೇಳಿದರೆ ವಿವಾದ ಆಗಬಹುದು. ಕೆಲವು ಸಾಹಿತಿಗಳ ಮೇಲೂ ಆರ್‌ಎಸ್‌ಎಸ್‌ನವರ ಕಣ್ಣಿದೆ. ಅದರಲ್ಲಿ‌ ಅರವಿಂದ ಮಾಲಗತ್ತಿ, ಮಲ್ಲಿಕಾ ಘಂಟಿಯ ಮೇಲೂ ಅವರ ಕಣ್ಣಿದೆ. ಹಾಗಾಗಿ ಆ ಶ್ಲೋಕ ಸಿಕ್ಕಿದರೆ ಕೊಡಿ, ನಾನೇ ಹೇಳುತ್ತೇನೆ ಎಂದು ಅವರು ಹೇಳಿದ್ದಾರೆ.

    ಒಟ್ಟಿನಲ್ಲಿ ನನ್ನ ಇಮೇಜ್ ಕಡಿಮೆ ಮಾಡೋದು, ಸಾರ್ವಜನಿಕ ಜೀವನದಲ್ಲಿ ನನ್ನನ್ನು ಖಳನಾಯಕನನ್ನಾಗಿ ಮಾಡೋದೆ ಅವರ ಉದ್ದೇಶ. ಆದರೂ ಸತ್ಯ ಹೇಳದೆ ಇದ್ದರೆ ಆತ್ಮದ್ರೋಹ ಆಗುತ್ತೆ. ಹಾಗಾಗಿ ನಾನು ಸಾಧ್ಯವಾದಷ್ಟು ಸತ್ಯವನ್ನು ಎಲ್ಲರ ಮುಂದೆ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

    ಆರ್​ಎಸ್​ಎಸ್​ ಅವರು ಇವ ನಮ್ಮವ ನಮ್ಮವ ಅಂತ ವಚನ ಹೇಳ್ತಾರೆ. ಆದರೆ ನೀ ಯಾವ ಜಾತಿ ಅಂತ ಕೇಳ್ತಾರೆ. ಯಾರಿಗೆ ಮನುಷ್ಯತ್ವ ಇರುವುದಿಲ್ಲವೋ ಅವರು ಮಾತ್ರ ಜಾತಿ ಮಾತುಗಳನ್ನು ಆಡುತ್ತಾರೆ. ಯೂನಿವರ್ಸಿಟಿಯಲ್ಲಿ ಓದಿದವರೇ ಹೆಚ್ಚೆಚ್ಚು ಜಾತಿ ವಾದಿಗಳಾಗಿದ್ದಾರೆ. ರಾಜಕೀಯದಲ್ಲಿ ಓಟು ಕೇಳಲು ಹೋದಾಗ ಇವೆಲ್ಲವೂ ಗೊತ್ತಾಗುತ್ತದೆ. ವಿದ್ಯೆ ಕಲಿಯೋದು ಮನುಷ್ಯತ್ವ ಬೆಳೆಸಿಕೊಳ್ಳುವುದಕ್ಕೆ. ಪುರೋಹಿತರನ್ನು ತಲೆ ಬಗ್ಗಿಸಿ ನಮಸ್ಕರಿಸುತ್ತೇವೆ. ಎದುರಿಗೆ ದಲಿತ ಬಂದರೆ ಏನ್ಲಾ ಅಂತೀವಿ. ಈ ನಡವಳಿಕೆಯೇ ಗುಲಾಮಗಿರಿಯ ಸಂಕೇತ. ಒಂದೊಂದು ಜಯಂತಿ ಮಾಡೋರನ್ನು ಒಂದೊಂದು ವರ್ಗ ಮಾಡಿಬಿಟ್ಟಿದ್ದಾರೆ.ಇದು ನಿಲ್ಲಬೇಕು. ಸಾಮಾಜಿಕ, ಆರ್ಥಿಕ ಶಕ್ತಿ ನಮಗೆ ಬಂದರಷ್ಟೆ ಇದೆಲ್ಲವೂ ನಿಲ್ಲುತ್ತದೆ. ನಾವು ಇದನ್ನು ಕಲಿಯದಿದ್ದರೆ ಸಮಾಜ ಬದಲಾವಣೆ ಆಗಲ್ಲ. ವಿದ್ಯಾವಂತರು ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ನಾನು ಯಾರಿಗೂ ಸಲಾಂ ಹೊಡೆದು ರಾಜಕಾರಣ ಮಾಡಲ್ಲ. ಅಧಿಕಾರ ಬರುತ್ತೆ ಹೋಗುತ್ತೆ. ಇನ್ನೊಬ್ಬರನ್ನು ಪ್ರೀತಿಸುವುದೇ ಧರ್ಮ‌. ಧರ್ಮಕ್ಕೆ ಬೇರೆ ವ್ಯಾಖ್ಯಾನವೇ ಇಲ್ಲ.ಬೇರೆಯವರಿಗೆ ಕೆಡಕು ಬಯಸದಿದ್ದರೆ ಅದೇ ಧರ್ಮ. ಧರ್ಮದ ಬಗ್ಗೆ ಇರುವ ಪುಸ್ತಕ ಓದಿದರೆ ತಲೆ ಕೆಟ್ಟು ಹೋಗುತ್ತದೆ ಎಂದು ಅವರು ನುಡಿದಿದ್ದಾರೆ. (ದಿಗ್ವಿಜಯ ನ್ಯೂಸ್​)

    ಪ್ರೀತಿಸಿ ಮದುವೆಯಾಗಿದ್ದ ಹುಡುಗಿ ಮಸಣ ಸೇರಿದಳು! ಇಷ್ಟಕ್ಕೆಲ್ಲ ಕಾರಣವಾಗಿದ್ದು ಒಂದು ಮೊಬೈಲ್​

    48 ಗಂಟೆಗಳಲ್ಲಿ 9 ಕಾಮುಕರಿಂದ 13 ಬಾರಿ ರೇಪ್​: ನರಕಯಾತನೆ ಬಿಚ್ಚಿಟ್ಟ 9ನೇ ತರಗತಿ ವಿದ್ಯಾರ್ಥಿನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts