ತಿರುಪತಿ: ದೂರು ನೀಡಲು ಬಂದ ಯುವತಿಯ ಮೇಲೆ ಬೆಲ್ಟ್ನಿಂದ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ ಆರೋಪ ಆಂಧ್ರ ಪ್ರದೇಶದ ತಿರುಪತಿಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ಕೇಳಿಬಂದಿದೆ.
ದೂರಿನ ಪ್ರತಿಯನ್ನೂ ನೋಡದೆ ಯುವತಿಯ ಮೇಲೆ ಎಸ್ಐ ಹಲ್ಲೆ ಮಾಡಿದ್ದು, ಈ ಸಂಬಂಧ ತನಿಖೆ ನಡೆಸಲು ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಘಟನೆಯ ವಿವರಣೆಗೆ ಬರುವುದಾದರೆ ತಿರುಪತಿ ಉಪನಗರದ ಉಪ್ಪರಪಲ್ಲೆ ನಿವಾಸಿ ವನಿತಾವಾಣಿ ಹಾಗೂ ನೆರೆಮನೆಯವರ ನಡುವೆ ಯಾವುದೋ ಒಂದು ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ವನಿತಾ ಮೇಲೆ ಹಲ್ಲೆ ಮಾಡಿದ್ದ. ಈ ಸಂಬಂಧ ದೂರು ನೀಡಲು ಎಂಆರ್ ಪಲ್ಲಿ ಪೊಲೀಸ್ ಠಾಣೆಗೆ ವನಿತಾ ತೆರಳಿದ್ದಳು.
ಇದನ್ನೂ ಓದಿ: ಪತ್ನಿಗೆ ತಾನೇ ಗುಂಡು ಹಾರಿಸಿ ಕಟ್ಟು ಕತೆ ಕಟ್ಟಿದ್ದ ಖತರ್ನಾಕ್ ಪತಿ ಬಂಧನ..!
ದೂರು ಸ್ವೀಕರಿಸದ ಎಸ್ಐ, ನನ್ನ ಮೇಲೆ ಬೆಲ್ಟ್ನಿಂದ ಹಲ್ಲೆ ಮಾಡಿದ್ದಲ್ಲದೆ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ಆರೋಪಿಸಿ, ಕಣ್ಣೀರಿಟ್ಟಿದ್ದಾಳೆ. ಎಸ್ಐ ವಿರುದ್ಧ ಕ್ರಮ ಜರುಗಿಸುವಂತೆ ವನಿತಾ ಮೇಲಾಧಿಕಾರಿಗಳಿಗೆ ದೂರು ನೀಡಿದ್ದು, ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ರೆಡ್ಡಿ ತನಿಖೆಗೆ ಆದೇಶಿಸಿದ್ದಾರೆ. (ಏಜೆನ್ಸೀಸ್)
ಕೈ ಕಳೆದುಕೊಂಡು ಕೇರಳ ಯೋಧನ ಜೀವ ಉಳಿಸಿ, ಮದ್ವೆಯಾಗಿರುವ ಛತ್ತೀಸ್ಗಢ ಮಹಿಳೆಯ ಹೊಸ ಸಾಹಸ!