More

    ಹೊಸ ‘ಹೋಪ್​’ನಲ್ಲಿ ಶ್ವೇತಾ ಶ್ರೀವಾತ್ಸವ್​; ನಾಲ್ಕು ವರ್ಷಗಳ ನಂತರ ಮರಳಿ ನಟನೆಗೆ…

    ಬೆಂಗಳೂರು: ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಕಿರಗೂರಿನ ಗಯ್ಯಾಳಿಗಳು’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶ್ವೇತಾ ಶ್ರೀವಾತ್ಸವ್ ನಟನೆಗೆ ಮರಳಲಿದ್ದಾರೆ ಎಂಬ ಸುದ್ದಿ ಕಳೆದ ವರ್ಷದಿಂದ ಕೇಳಿಬರುತ್ತಲೇ ಇದೆ. ಇಷ್ಟರಲ್ಲಾಗಲೇ ಅವರು, ‘ರಹದಾರಿ’ ಎಂಬ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸಬೇಕಿತ್ತು. ಆ ಚಿತ್ರ ಮುಂದಿನ ವರ್ಷದ ಮಾರ್ಚ್​ನಲ್ಲಿ ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನವೇ ಅವರು ಸದ್ದಿಲ್ಲದೆ ಇನ್ನೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಶ್ವೇತಾ ಶ್ರೀವಾತ್ಸವ್ ಅಭಿನಯದ ಹೊಸ ಚಿತ್ರಕ್ಕೆ ‘ಹೋಪ್’ ಎಂಬ ಹೆಸರಿಡಲಾಗಿದ್ದು, ಇದನ್ನು ಅಂಬರೀಶ್ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕೆ.ಎ.ಎಸ್. ಅಧಿಕಾರಿಯಾಗಿ ಶ್ವೇತಾ ಕಾಣಿಸಿಕೊಳ್ಳಲಿದ್ದು, ಆಡಳಿತಾತ್ಮಕ ಸೇವೆಗಳ ಕುರಿತು ಈ ಚಿತ್ರದ ಕಥೆ ಸಾಗುತ್ತದಂತೆ. ಈ ಕುರಿತು ವಿಜಯವಾಣಿಯ ಜತೆಗೆ ಮಾತನಾಡಿದ ಶ್ವೇತಾ, ‘ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಬಹಳ ಬುದ್ಧಿವಂತರಾಗಿರುತ್ತಾರೆ, ಚುರುಕಾಗಿರುತ್ತಾರೆ ಎಂಬ ಪ್ರತೀತಿ ಇದೆ. ಆದರೆ, ಈ ಚಿತ್ರದಲ್ಲಿ ನಾನು ಮೃದುಹೃದಯಿಯಾಗಿರುತ್ತೇನೆ, ಅಷ್ಟೇ ಪ್ರಾಮಾಣಿಕಳಾಗಿರುತ್ತೇನೆ. ಆಕೆಯ ಸುತ್ತ ಏನೆಲ್ಲಾ ಆಗುತ್ತದೆ ಎಂಬ ಕಥೆ ಈ ಚಿತ್ರದಲ್ಲಿದೆ. ಲಾಕ್​ಡೌನ್ ನಂತರ ಈ ಕಥೆ ಕೇಳಿದೆ. ಬಹಳ ಇಷ್ಟವಾಯ್ತು. ರೀಎಂಟ್ರಿಗೆ ಹೇಳಿ ಮಾಡಿಸಿದಂತಹ ಚಿತ್ರ ಇದು ಎಂದೆನಿಸಿತು. ಹಾಗಾಗಿ ಒಪ್ಪಿಕೊಂಡೆ, ಈಗಾಗಲೇ 12 ದಿನಗಳ ಚಿತ್ರೀಕರಣ ಮುಗಿದಿದೆ’ ಎನ್ನುತ್ತಾರೆ.

    ‘ಇದು ದೇಶಕ್ಕೇ ಹೇಳಬೇಕಾದ ಕಥೆ. ಜನ ಈ ಕಥೆಯೊಂದಿಗೆ ಜನ ಗುರುತಿಸಿಕೊಳ್ಳುತ್ತಾರೆ. ಈಗ ಏನು ನಡೆಯುತ್ತಿದೆಯೋ ಅದನ್ನು ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ವಿಶೇಷವೆಂದರೆ, ಏಕಲವ್ಯ ಪ್ರಶಸ್ತಿ ಗೆದ್ದಿರುವ ಕಿರಿಯ ಸ್ನೂಕರ್ ಚಾಂಪಿಯನ್ ವರ್ಷ ಸಂಜೀವ್ ಈ ಚಿತ್ರವನ್ನು ನಿರ್ವಿುಸುತ್ತಿದ್ದಾರೆ. ಕ್ರೀಡೆಗೆ ಸಂಬಂಧಪಟ್ಟವರು ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಖುಷಿಯ ವಿಷಯ. ಒಟ್ಟಾರೆ, ಇದು ನನ್ನ ಪಾಲಿಗೆ ವಿಶೇಷವಾದ ಚಿತ್ರ’ ಎನ್ನುತ್ತಾರೆ ಶ್ವೇತಾ.

    ಪಕ್ಕದ್ಮನೆ ಆಂಟಿಗೆ ಗಂಡ ಸುಖಕೊಡಲ್ವಂತೆ- ಸದಾ ಪೀಡಿಸುತ್ತಿದ್ದಾಳೆ: ಹೇಗೆ ತಪ್ಪಿಸಿಕೊಳ್ಳಲಿ?

    ಕೈಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬೇಡಿ; ಸಿ.ಎಂ. ಇಬ್ರಾಹಿಂ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts